ಮಂಗಳೂರು: ನಗರದ ಬೊಂದೇಲ್ ಕಂಬ್ಳ ಅಶ್ವತ್ಥ ಕಟ್ಟೆ ಸಮೀಪದ ಪಿ.ಡಬ್ಲ್ಯೂ.ಡಿ. (PWD) ಕಚೇರಿಯ ಮುಂಭಾಗದಲ್ಲಿ, ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನೆಯಡಿ ನಿರ್ಮಾಣವಾಗಲಿರುವ ಮಹಾತ್ಮ ಗಾಂಧಿ ಅಂಗನವಾಡಿ ಕಟ್ಟಡಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಶಿಲಾನ್ಯಾಸ ನೆರವೇರಿಸಿದರು. 2024-25ನೇ ಸಾಲಿನ ನಗರ ಯೋಜನೆಯಡಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಈ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಶ್ರೀಮತಿ ಶ್ವೇತಾ ಎನ್., ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಶ್ರೀ ಸಂದೀಪ್, ಪ್ರಮುಖರಾದ ಶ್ರೀ ಶಿವಾಜಿ ಕುಲಾಲ್, ಶ್ರೀ ರವೀಂದ್ರ ನಾಯ್ಕ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.