ಮಂಗಳೂರು: ಮಂಗಳೂರಿನ ತೆಲುಗು ಕಲಾ ಸಮಿತಿಯು ಲಯನ್ಸ್ ಕ್ಲಬ್, ಸುರತ್ಕಲ್ನಲ್ಲಿ "ಶ್ರೀ ಪರಾಭವ ನಾಮ ಸಂವತ್ಸರ ಉಗಾದಿ"ಯನ್ನು ಅದ್ದೂರಿಯಾಗಿ ಆಚರಿಸಲಾಯಿತು
ಬಳಿಕ ನೆಡೆದ ವಾರ್ಷಿಕ ಮಹಾ ಸಭೆಯಲ್ಲಿ 2026-28 ಕ್ಕೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು ನಳಿನಿ ಚೆರುಕೂರಿ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಾಗವರಪು ಶ್ರೀನಿವಾಸ ರಾವ್ ಪ್ರಧಾನ ಕಾರ್ಯದರ್ಶಿಯಾಗಿ, ನಾದೆಳ್ಳ ವೆಂಕಟ ಫಣಿ, ರಾವೂರಿ ನಾಗಫಣಿ ಕುಮಾರ್ ಅವರನ್ನು ಉಪಾಧ್ಯಕ್ಷರಾಗಿ ಮುಂದುವರಿಸಲಾಯಿತು. ಶ್ರೀ ಕುಮಾರ್ ರಾವ್ ಅಮರ ಅವರನ್ನು ಖಜಾಂಚಿಯಾಗಿ ಮತ್ತು ಚಂದ್ರಶೇಖರ್ ಅವರನ್ನು ಜಂಟಿ ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು. ಪ್ರಭು ನಾಯ್ಡು ಮತ್ತು ರಾಮಕೃಷ್ಣ ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು.ಹಿಂದಿನ ಅಧ್ಯಕ್ಷ ಪ್ರೊ. ಕರ್ರಾ ರಾಮಚಂದ್ರರ್ ಮತ್ತು ನಿರ್ಗಮಿತ ಕಾರ್ಯದರ್ಶಿ ಇನುಮಲ ಶ್ರೀನಿವಾಸ ರಾವ್ ಅವರನ್ನು ಸನ್ಮಾನಿಸಲಾಯಿತು.
ಗೌರವ ಅಧ್ಯಕ್ಷ ಶ್ರೀ ನಾದೆಳ್ಳ ಸಾಂಬಶಿವ ರಾವ್ ಮತ್ತು ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಆರ್. ಕೃಷ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮಂಗಳೂರು ಮತ್ತು ಸುತ್ತಮುತ್ತಲಿನ 200 ಕ್ಕೂ ಹೆಚ್ಚು ತೆಲುಗು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಸದಸ್ಯರು ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.