image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಕಾರಾತ್ಮಕ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ -ಪ್ರೊ. ಶಾಂತಿಶ್ರೀ ಧುಲಿಪುಡಿ ಪಂಡಿತ್

ಸಕಾರಾತ್ಮಕ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ -ಪ್ರೊ. ಶಾಂತಿಶ್ರೀ ಧುಲಿಪುಡಿ ಪಂಡಿತ್

ಮಂಗಳೂರು: ದೊರೆತ ಅವಕಾಶ ವನ್ನು ಬಳಸಿಕೊಂಡು ನಮ್ಮ ಸುತ್ತ ಮುತ್ತಲಿನ ಜನ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತವರಾಗಿ ಎಂದು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಾಂತಿಶ್ರೀ ಧುಲಿಪುಡಿ ಪಂಡಿತ್ ಯುವ ಪದವೀಧರರಿಗೆ ಕರೆ ನೀಡಿದರು. ಅವರು ಶನಿವಾರ  ವಿಶ್ವ ವಿದ್ಯಾನಿಲಯ ದೇರಳಕಟ್ಟೆ ಆವರಣದ ಯೆಂಡುರೆನ್ಸ್ ಜೋನ್ ಸಭಾಂಗಣದಲ್ಲಿ ಹಮ್ಮಿಕೊಂಡ ಯೆನೆಪೊಯ (ಡೀಮ್ಡ್ ಯೂನಿವರ್ಸಿಟಿ)15ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡುತ್ತಾ,"ನಿಮ್ಮ ಮುಂದೆ ಅಪಾರ ಅವಕಾಶಗಳಿವೆ.ಈ ಸಂದರ್ಭದಲ್ಲಿ  ನಿಮ್ಮ ಸ್ವಂತ ಬೆಳವಣಿಗೆ ಯನ್ನು ಮಾತ್ರವಲ್ಲದೆ ನಿಮ್ಮ ಸಮುದಾ ಯಗಳ ಬೆಳವಣಿಗೆಯನ್ನು ಹೆಚ್ಚಿಸಲು ಇಡೀ ರಾಷ್ಟ್ರವನ್ನು ಬಲಪಡಿಸಲು ಈ ಅವಕಾಶ ವನ್ನು ಬಳಸಿಕೊಳ್ಳಬೇಕಾಗಿದೆ.ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿ ಸಾಗುತ್ತಿರುವಾಗ 2020ರ ಹೊಸ ಶಿಕ್ಷಣ ನೀತಿಯ ಮೂಲಕ ಬದಲಾ ವಣೆ ಗೊಂಡ ನೀತಿಯ ಮೊದಲ ತಂಡದ ಪದವಿಧರರಾದ ನೀವು ದೇಶದ ಆರ್ಥಿಕ,ಸಾಂಸ್ಕೃತಿಕ ಜಾಗತಿಕ ನೆಲೆಯಲ್ಲಿ  ಉನ್ನತ  ಕನಸುಗಳೊಂದಿಗೆ ನನಸು ಮಾಡಲು ಸಾಗಬೇಕಾಗಿದೆ.ಭಾರತದ ಶಕ್ತಿಯನ್ನು ಕೇವಲ ಆರ್ಥಿಕ ಬೆಳವಣಿಗೆ ಯಿಂದ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ. ದೇಶದ ಭಾಷೆ ವೈವಿಧ್ಯಮಯ  ಸಂಸ್ಕೃತಿ ಸಂಪ್ರದಾಯಗಳಿಂದ  ಕೂಡಿದ ಸಾಮಾಜಿಕ ಸ್ತರಗಳಲ್ಲಿ ದೇಶದ ಶಕ್ತಿ ವಿಸ್ತರಿಸಿದೆ.ಈ ವೈವಿಧ್ಯತೆ ಯನ್ನು ಸ್ವೀಕರಿಸಿ, ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿ. ನಮ್ಮ ಸುತ್ತ ಮುತ್ತಲಿನ ಜಗತ್ತಿನ ಜನರ ಬದುಕಿನಲ್ಲಿ  ಸಕಾರಾತ್ಮಕ ಬದಲಾವಣೆಗೆ ಕಾರಣ ರಾಗಿರಿ.ಸವಾಲುಗಳನ್ನು ಎದುರಿಸಿ ಮುನ್ನಡೆಯಿರಿ ದೇಶದಲ್ಲಿ ಮಹಿಳಾ ಶಕ್ತಿಗೆ ಅಹಲ್ಯ ಬಾಯಿ ಹೋಳ್ಕರ್" ,ಮಹಿಳಾ ಶಿಕ್ಷಣಕ್ಕಾಗಿ ದುಡಿದ ಸಾವಿತ್ರಿ ಬಾಯಿ ಪುಲೆ,ದೇಶದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ದ್ರೌಪದಿ ಮುರ್ಮ್ ಬದಲಾವಣೆಗೆ  ಸಾಕ್ಷಿಯಾಗಿದ್ದಾರೆ ಎಂದು ಅವರು  ತಿಳಿಸಿದ್ದಾರೆ.ಮಹಿಳಾ ಮತ್ತು ಪುರುಷ ಪದವೀಧರರು ಉತ್ತಮ ನಾಯಕತ್ವದೊಂದಿಗೆ  ದೇಶದ ಉತ್ತಮ ಭವಿಷ್ಯಕ್ಕಾಗಿ ಪ್ರಯತ್ನಿಸಬೇಕಾಗಿದೆ ಎಂದವರು ಕರೆ ನೀಡಿದರು.

 ಪದವೀಧರರ ಮುಂದಿನ ಬದುಕಿನ  ಹಾದಿ ಸಾಕಷ್ಟು ಸವಾಲುಗಳನ್ನು ಎದುರಿಸ ಬೇಕಾಗಬಹುದು, ಜೀವನವು ನಿಮ್ಮನ್ನು ಹಲವು  ಪರೀಕ್ಷೆಗಳಿಗೆ ಒಡ್ಡಬಹುದು ಅದು ಅನಿವಾರ್ಯ. ಆದರೆ  ಅನಿಶ್ಚಿತತೆ ಮತ್ತು ಸವಾಲುಗಳಿಗೆ  ಭಯ ಪಡ ಬೇಕಾಗಿಲ್ಲ.ಪ್ರತಿ ಸೋಲು ಯಶಸ್ಸಿನ  ಮೆಟ್ಟಿಲಾಗ ಬಹುದು. ಯೆನೆಪೊಯದಲ್ಲಿ ನಿಮ್ಮ ಶಿಕ್ಷಣವು ಈಗಾಗಲೇ ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸಿದೆ.

ಒಂದೆಡೆ, ನಿಮಗೆ ಬೌದ್ಧಿಕ  ಶಕ್ತಿಯ ವಿಸ್ತರಣೆಯ ಗುಣ  ಬೇಕು. ನೀವು ಗಳಿಸುವ ಡಿಪ್ಲೊಮಾ ಅಂತಿಮವಲ್ಲ, ಇದು ಕಲಿಯುವುದನ್ನು ಮುಂದುವರಿಸಲು ಪರವಾನಗಿ. ಆರೋಗ್ಯ ವಿಜ್ಞಾನ, ತಂತ್ರಜ್ಞಾನ ಅಥವಾ ನಿರ್ವಹಣೆ ಯಲ್ಲಿ ನೀವು ಹೊಂದಿರುವ ವಿಶೇಷ ಜ್ಞಾನವು  ಸ್ಥಗಿತವಾಗಬಾರದು.ನಿಮ್ಮ ಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿರುವಂತೆ  ನೀವು ನೋಡಿ ಕೊಳ್ಳಬೇಕು .ಯಾವಾಗಲೂ ಹೊಸ ತನವನ್ನು ಮೈಗೂಡಿಸಿಕೊಳ್ಳಲು  ಸಿದ್ಧರಾ ಗಿರಬೇಕು. ಹಳೆಯ ಮಾದರಿಗಳಿಂದಲೂ ಕಲಿಯುವ ಗುಣ ಬೇಕು.ಜೊತೆಗೆ  ಹೊಸ ತಾಂತ್ರಿಕ ಅಥವಾ ಕ್ಲಿನಿಕಲ್  ‌ನೈಜ ವಿಷಯ ಗಳನ್ನು ಅಳವಡಿಸಿಕೊಳ್ಳುವಷ್ಟು ಚುರುಕಾಗಿರಬೇಕು. ಬಳಕೆಯಲ್ಲಿಲ್ಲದಿರುವುದನ್ನು ಕೈ ಬಿಡಲು  ಮತ್ತು ನಿಜವಾದ ಸ್ಪರ್ಧಾತ್ಮಕ ಜ್ಞಾನದ  ಪ್ರಯೋಜನವನ್ನು ಪಡೆಯಲು ಇದು ಏಕೈಕ ಮಾರ್ಗವಾಗಿದೆ ಎಂದವರು ತಿಳಿಸಿದ್ದಾರೆ.

ನಿಮ್ಮ ಜೀವನದ ಅಂತಿಮ ಕೊಡುಗೆ  ಯಶಸ್ಸು, ಭೌತಿಕ ಪ್ರತಿಫಲಗಳು, ಬಿರುದು ಗಳಿಂದ  ಸಾರ್ವಜನಿಕ ಸನ್ಮಾನ ಗಳಿದ ಅಲ್ಲ.ಆ ರೀತಿಯ ಯಶಸ್ಸು ಬಾಹ್ಯ, ಕ್ಷಣಿಕ ಮತ್ತು ರಾತ್ರೋರಾತ್ರಿ ಕಣ್ಮರೆಯಾಗಬಹುದು. ಉಳಿಯುವುದು ವ್ಯವಸ್ಥೆಯಲ್ಲಿ ನೀವು ಇತರರ ಬದುಕಿನಲ್ಲಿ ಮಾಡುವ ಸಕಾರಾತ್ಮಕ  ಸುಧಾರಣೆ,ಬದಲಾವಣೆ ಮಹತ್ವದ್ದಾಗಿದೆ ಎಂದರು.

ಘಟಿಕೋತ್ಸವದ ಅಧ್ಯಕ್ಷತೆಯನ್ನು ಕುಲಾಧಿಪತಿ  ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ  ವಹಿಸಿ ವಿವಿಧ ವಿಭಾಗಗಳ ಪದವೀಧರರಿಗೆ ಪದವಿ ಪ್ರಧಾನ ಮಾಡಿದರು.

  ಸಮಾರಂಭದಲ್ಲಿ ಸೆಂಟರ್ ಫಾರ್ ಸೆಲ್ಯುಲಾರ್ & ಮಾಲಿಕ್ಯುಲರ್ ಪ್ಲಾಟ್‌ಫಾರ್ಮ್ಸ್ (ಸಿ ಸಿಎಎಂಪಿ), ಬೆಂಗಳೂರು  ಇದರ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ತಸ್ಲಿಮರಿಫ್ ಸಯ್ಯದ್  ಗೌರವ ಅತಿಥಿಯಾಗಿಭಾಗವಹಿಸಿ ಮಾತನಾಡುತ್ತಾ, ಉಪಕುಲಪತಿ ಡಾ. ಎಂ. ವಿಜಯಕುಮಾರ್ ಸ್ವಾಗತಿಸಿ ವಿಶ್ವವಿದ್ಯಾಲಯದ ವರದಿ ವಾಚಿಸಿದರು. 

ಸಮಾರಂಭದಲ್ಲಿ  ದಂತ, ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸಸ್, ಆಯುರ್ವೇದ, ಹೋಮಿಯೋಪತಿ, ವಿಜ್ಞಾನ, ಕಲೆ ಮತ್ತು ಸಮಾಜ ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜೆಂಟ್ ಮುಂತಾದ ವಿವಿಧ ವಿಭಾಗಗಳ ಚಿನ್ನದ ಪದಕ ವಿಜೇತರು, ಡಾಕ್ಟರೇಟ್ ಪದವೀಧರರು ಸೇರಿದಂತೆ ಒಟ್ಟು  3729 ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು.

ಸಮಾರಂಭದಲ್ಲಿ ಸಹ ಕುಲಾಧಿಪತಿ ಮೊಹಮ್ಮದ್ ಫರ್ಹಾದ್ ಯೆನೆಪೊಯ ಪರೀಕ್ಷಾಂಗ ನಿಯಂತ್ರಕ ಡಾ. ಬಿ.ಟಿ. ನಂದೀಶ್ ಸಹ ಕುಲಪತಿ ​​ಡಾ.ಬಿ.ಎಚ್. ಶ್ರೀಪತಿ ರಾವ್,ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ.ಎಸ್ ಮೊದಲಾದ ವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ