ಮಂಗಳೂರು : ದೀರ್ಘಕಾಲದ ಕೆಂಪು ಕಲ್ಲಿನ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್ಒಪಿ) ಬಿಡುಗಡೆಯಾಗಲಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ, ಹಿಂದೆ ಸ್ಪಷ್ಟ ಪರವಾನಗಿಗಳ ಕೊರತೆಯಿಂದ ಉಂಟಾದ ಗೊಂದಲ, ದುರುಪಯೋಗ ಮತ್ತು ಪರಿಹರಿಸಲು ಶಾಶ್ವತ ಪರಿಹಾರವನ್ನು ರೂಪಿಸಲಾಗಿತ್ತು ಎಂದು ಹೇಳಿದರು. ಈಗ ಹೊಸ ಕಾನೂನು ಚೌಕಟ್ಟನ್ನು ಸ್ಥಾಪಿಸಲಾಗಿದ್ದು, ಕೆಂಪು ಕಲ್ಲು ಮಾರಾಟಗಾರರು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದೆ. ಇನ್ನೂ ಯಾರು ವ್ಯಾಪಾರ ಮಾಡಿದರು ಪರವಾನಿಗೆ ಪಡೆದು ಮಾಡಬೇಕು ಎಂದರು.
ಹೊಸ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಖ್ಯಮಂತ್ರಿ ಕೂಡ ಒಪ್ಪಿಗೆ ನೀಡಿದ್ದಾರೆ. ಕೆಂಪು ಕಲ್ಲು ವ್ಯವಹಾರಕ್ಕಾಗಿ 53 ಅರ್ಜಿಗಳಲ್ಲಿ 25 ಅರ್ಜಿದಾರರಿಗೆ ಈಗಾಗಲೇ ಹೊಸ ಕಾನೂನು ಚೌಕಟ್ಟಿನಡಿಯಲ್ಲಿ ಪರವಾನಗಿ ನೀಡಲಾಗಿದೆ ಎಂದರು. ಕೆಂಪು ಕಲ್ಲಿಗೆ ದರ ನಿಗದಿ ಬಗ್ಗೆ ಚರ್ಚೆ ನಡೆಸಲಾಗುವುದು. ಜನ ಸಾಮಾನ್ಯರಿಗೆ ಸುಲಭ ಮತ್ತು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹಿಂದಿಗಿಂತ ಅಧಿಕ ಹಣ ಪಡೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದರು. ಈಗಾಗಲೇ ಎಲ್ಲಾ ರೀತಿಯ ರಾಜ ಧನ ಮತ್ತು ತೆರಿಗೆ ವಿನಾಯಿತಿ ಕೊಟ್ಟು ಅಧಿಕ ಹಣ ಪಡೆಯುದು ಹೇಗೆ ?ಎಂದು ಪ್ರಶ್ನಿಸಿದರು. ಹಿಂದೆಗಿಂತ ಕಡಿಮೆ ದರದಲ್ಲಿ ಜನರಿಗೆ ಕಲ್ಲು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ಸರ್ಕಾರವೇ ದರ ನಿಗದಿ ಪಡಿಸಲಿದೆ ಎಂದು ಖಾದರ್ ತಿಳಿಸಿದರು. ಈ ವಿಷಯದ ಬಗ್ಗೆ ಪ್ರತಿಭಟಿಸುವ ಹಕ್ಕ ಪ್ರಜಾಪ್ರಭುತ್ವದಲ್ಲಿ ಇದೆ ಎಂದು ಈ ವೇಳೆ ಖಾದರ್ ಒಪ್ಪಿಕೊಂಡರು ಮತ್ತು ರಾಜಕೀಯ ಪ್ರತಿಭಟನೆಗಳು ಅರ್ಥವಾಗುವಂತಹದ್ದಾಗಿದ್ದರೂ, ಈಗ ನ್ಯಾಯಯುತ ಮತ್ತು ಕಾನೂನುಬದ್ಧ ಪರಿಹಾರವನ್ನು ನೀಡಲಾಗಿದೆ, ಇದು ಕೆಂಪು ಕಲ್ಲು ವ್ಯಾಪಾರದಲ್ಲಿರುವವರಿಗೆ ಪರಿಹಾರವನ್ನು ನೀಡುತ್ತದೆ ಎಂದು ತಿಳಿಸಿದರು.