ಮಂಗಳೂರು: ಅದಾನಿ ಗ್ರೂಪ್ ನ ಸಹಕಾರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಸುಮಾರು 4 ಟನ್ ಭಾರದ ತುಳುನಾಡಿನ ಗಂಡು ಕಲೆ ಯಕ್ಷಗಾನ ಶೈಲಿಯ 11.3 ಫೀಟ್ ಎತ್ತರವಿರುವ ಶ್ರೀ ರಾಮನ ಶಿಲಾ ವಿಗ್ರಹವು ಮಂಗಳೂರು ವಿಮಾನ ನಿಲ್ದಾಣದ ಎದುರು ಸ್ವಾಗತ ದ್ವಾರದ ಬಳಿ ಅಲಂಕರಿಸಲಾಯಿತು. ಕೃಷ್ಣಶಿಲೆ, ಅಮೃತಶಿಲೆ, ಮಾರ್ಬಲ್, ಸ್ಯಾಂಡ್ ಸ್ಟೋನ್ನ ವಿಗ್ರಹ ನಿರ್ಮಿಸಿರುವ ಅನುಭವಿ ಶಿಲ್ಪಿ ಬಿಹಾರ ಮೂಲದ ಹಿಮಾಂಶು ಕುಮಾರ್ ಅವರು 60 ದಿನಗಳಲ್ಲಿ ವಿಗ್ರಹ ನಿರ್ಮಿಸಿದ್ದಾರೆ.