ಮಂಗಳೂರು: ದ.ಕ.ಜಿಲ್ಲೆಯ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗಕ್ಕೆ ಪಿಎಂ ಇ ಬಸ್ ಸೇವಾ ಯೋಜನೆಯಡಿ 100 ಎಲೆಕ್ಟಿಕ್ ಬಸ್ಗಳ ಘಟಕ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದ.ಕ.ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಈ ಎಲೆಕ್ನಿಕ್ ಬಸ್ಗಳು ನಗರದಲ್ಲಿ ಕಾರ್ಯಾಚರಿಸಲು ಪಂಪ್ವೆಲ್ನಲ್ಲಿ ಮಂಗಳೂರು ನಗರ ಪಾಲಿಕೆ ವಶಪಡಿಸಿಕೊಂಡಿರುವ 7 ಎಕರೆ ಜಮೀನನ್ನು ಕೆಎಸ್ಸಾರ್ಟಿಸಿ ನಿಗಮಕ್ಕೆ ಉಚಿತವಾಗಿ ಹಸ್ತಾಂತರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಇಲೆಕ್ಟಿಕಲ್ ಬಸ್ ಘಟಕ ಹಾಗೂ ವಿಭಾಗೀಯ ಕಾರ್ಯಾಗಾರ ನಿರ್ಮಿ ಸಲು ಉಳ್ಳಾಲ ತಾಲೂಕಿನ ಮುಡಿಪುವಿನ ಬಾಳೆಪುಣಿ ಗ್ರಾಮದ ಸರ್ವೆ ನಂ.87ರಲ್ಲಿ 9.90 ಎಕರೆ ಪಂಚಾಯತ್ ಜಮೀನನ್ನು ನಿಗಮಕ್ಕೆ ಉಚಿತವಾಗಿ ನೀಡಲು ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.