image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅರುಣ್ ಕುಮಾರ್ ಪುತ್ತಿಲ ಆಪ್ತ ಎಡಕ್ಕಾನ ರಾಜಾರಾಮ ಭಟ್‌ ದುಬೈನಲ್ಲಿ ಹೃದಯಾಘಾತದಿಂದ ನಿಧನ

ಅರುಣ್ ಕುಮಾರ್ ಪುತ್ತಿಲ ಆಪ್ತ ಎಡಕ್ಕಾನ ರಾಜಾರಾಮ ಭಟ್‌ ದುಬೈನಲ್ಲಿ ಹೃದಯಾಘಾತದಿಂದ ನಿಧನ

ಸುಳ್ಯ: ತಾಲ್ಲೂಕಿನ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆಯ ಮೂಲವಾಸಿ ಉದ್ಯಮಿ ಎಡಕ್ಕಾನ ರಾಜಾರಾಮ ಭಟ್‌ ಅವರು ಇಂದು (ಮಂಗಳವಾರ) ಮುಂಜಾನೆ ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಎಡಕ್ಕಾನ ಟ್ರೇಡರ್ಸ್‌ ಎಂಬ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ರಾಜಾರಾಮ ಭಟ್ ದುಬೈ ಹಾಗೂ ಮಸ್ಕತ್‌ನಲ್ಲಿ ಖರ್ಜೂರದ ವ್ಯಾಪಾರದಲ್ಲಿ ತೊಡಗಿದ್ದರು. ವ್ಯವಹಾರದ ನಿಮಿತ್ತ ಕೆಲದಿನಗಳ ಹಿಂದೆ ದುಬೈಗೆ ತೆರಳಿದ್ದ ಅವರು ಇಂದು ಮುಂಜಾನೆ ಅಚಾನಕ್ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಪರಿವಾರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದರು.

ಸ್ಥಳೀಯರು ಹಾಗೂ ಕುಟುಂಬಸ್ಥರಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.

Category
ಕರಾವಳಿ ತರಂಗಿಣಿ