image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರೋಟರಿ ಮಂಗಳೂರು ಸೆಂಟ್ರಲ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ರೋಟರಿ ಮಂಗಳೂರು ಸೆಂಟ್ರಲ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ರೋಟರಿ ಕ್ಲಬ್  ಮಂಗಳೂರು  ಸೆಂಟ್ರಲ್  ,ಶ್ರೀ ಶಾರದಾ ಪೂಜಾ  ಸಮಿತಿ,  ಮಂಗಳಾ   ಫ್ರೆಂಡ್ಸ್  ಸರ್ಕಲ್ ಊರ್ವಸ್ಟೋರ್   ಹಾಗೂ  ಎ ಜೆ  ಆಸ್ಪತ್ರೆ ಯ  ಜಂಟಿ  ಆಶ್ರಯದಲ್ಲಿ  ಊರ್ವ ಸ್ಟೋರ್ ನ  ಮಾನಸ ಮಂಟಪದ  ಸಭಾಂಗಣದಲ್ಲಿ  ಉಚಿತ ಆರೋಗ್ಯ ತಪಾಸಣಾ  ಶಿಬಿರ  ರವಿವಾರ ನಡೆಯಿತು.

ಶಿಬಿರ ವನ್ನು  ರೋಟರಿ ಕ್ಲಬ್  ಸೆಂಟ್ರಲ್ ನ  ಅಧ್ಯಕ್ಷ   ರೋ ಬ್ರಾಯನ್ ಪಿಂಟೊ  ಉದ್ಘಾಟಿಸಿದರು. ರೋ ರಾಜ್ ಗೋಪಾಲ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಜಿಲ್ಲೆ 3181 ಅಸಿಸ್ಟೆಂಟ್ ಗವರ್ನರ್  ಕೆ. ಯಂ .ಹೆಗ್ಡೆ ರೋಟರಿ ಕ್ಲಬ್  ಹಮ್ಮಿ ಕೊಂಡಿರುವ  ಸಾಮಾಜಿಕ  ಕಾರ್ಯ ಕ್ರಮಗಳ ಮಾಹಿತಿ ನೀಡಿದರು,   ಎ ಜೆ  ದಂತ ಮಹಾ ವಿದ್ಯಾಲಯದ  ಸಮುದಾಯ ಸೇವಾ ವಿಭಾಗದ  ಮುಖ್ಯಸ್ಥೆ  ಡಾ  .ವಿಜಯ  ಹೆಗ್ಡೆ ಶಿಬಿರದ  ಮಹತ್ವವನ್ನು ತಿಳಿಸಿದರು. ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಸಾಯಿಬಾಬಾ  ರಾವ್, ರಾಜೇಶ್ ಶೆಟ್ಟಿ ,ಮಂಗಳ ಸ್ಫೋರ್ಟ್ಸ್ ಸರ್ಕಲ್  ಊರ್ವ ಸ್ಟೋರ್ ನ  ಅಧ್ಯಕ್ಷ. ರಮೇಶ್  ಶೆಟ್ಟಿ, ರೋಟರಿ ಮಾಜಿ ಗವರ್ನರ್  ದೇವ ದಾಸ್ ರೈ, ಜಗನ್ನಾಥ್ ಶೆಟ್ಟಿ, ಜಾಕ್ಸನ್  ಸಲ್ದಾನಾ,ಡೆರಿಲ್  ಸ್ಟೀವನ್ ಡಿಸೋಜ, ಆ್ಯನ್ಸ್ ಪೂರ್ಣಿಮಾ ರೈ,  ಪ್ರಮೀಳಾ ಹೆಗ್ಡೆ, ನೀಲಂ  ಜಲನ್, ಗೀತಾ  ಬಿ  ರೈ   ಎ ಜೆ ಆಸ್ಪತ್ರೆ ಯ ವೈದ್ಯರು ಗಳು ಉಪಸ್ಥಿತರಿದ್ದರು. ರೋ ಭಾಸ್ಕರ್ ರೈ  ಕಟ್ಟ  ನಿರೂಪಿಸಿದರು.

 ಶಿಬಿರದಲ್ಲಿ  ಹೃದಯ  ತಪಾಸಣೆ, ಕಣ್ಣು  ತಪಾಸಣೆ ,   ಅಗತ್ಯ ವಿದ್ದವರಿ ಗೆ ಕನ್ನಡಕ  ವಿತರಣೆ, ರಕ್ತ  ದೊತ್ತಡ  ಸೇರಿದಂತೆ  ಎಲ್ಲಾ ರೀತಿಯ ವೈದ್ಯಕೀಯ   ಉಚಿತ ತಪಾಸಣೆ  ಹಾಗೂ ಚಿಕಿತ್ಸೆ  ಯನ್ನು  ನೀಡ ಲಾ ಯಿತು. ಶಿಬಿರದಲ್ಲಿ 124 ಫಲಾನುಭವಿಗಳಿಗೆ ಉಚಿತ ತಪಾಸಣೆ ನಡೆಸಲಾಯಿತು.

Category
ಕರಾವಳಿ ತರಂಗಿಣಿ