ಕೋಡಿಕಲ್: ಮಂಗಳೂರು ನಗರ ಉತ್ತರ ವ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದ ಪಾಲಿಕೆಯ 17ನೇ ವಾರ್ಡ್ ನಲ್ಲಿ ಕಳೆದ 5 ವರ್ಷದ ಅವಧಿ ಯಲ್ಲಿ 30 ಕೋಟಿಗೂ ಮಿಕ್ಕಿ ರಾಜ್ಯ, ಪಾಲಿಕೆಯಾ ವಿವಿಧ ಮೂಲಗಳ ಅನುದಾನದಲ್ಲಿ ಅಭಿವೃದ್ಧಿಗೆ ದಿಟ್ಟ ಹೆಜ್ಜೆಯಿಡಲಾಗಿದೆ. ಮೇಯರ್ ಮನೋಜ್ ಕುಮಾರ್ ಅವರ ದಿಟ್ಟ ಸಂಕಲ್ಪದಿಂದ ಉತ್ತಮ ಕೆಲಸ ಕಾರ್ಯಗಳಾಗಿದೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ವೈ ಹೇಳಿದರು.
ದೇರೆಬೈಲು ಉತ್ತರ 17ನೇ ವಾರ್ಡಿನ 11ನೇ ಅಡ್ಡರಸ್ತೆ ಜೋಗಟ್ಟೆಯ ಸುಮಾರು 18 ಲಕ್ಷ ವೆಚ್ಚದ ನೂತನ ರಸ್ತೆಯ ಉದ್ಘಾಟನೆ ಹಾಗೂ 35 ಲಕ್ಷ ವೆಚ್ಚದ ಒಳ ಚರಂಡಿ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ,ಕೋಡಿಕಲ್ ಪ್ರಮುಖ ರಸ್ತೆ, ಒಳರಸ್ತೆಗಳು ,ಒಳಚರಂಡಿ ,ಮಳೆ ನೀರು ಹರಿಯುವ ತೋಡು, ಅಂಬೇಡ್ಕರ್ ಭವನ ,ಅಂಗನವಾಡಿ ಹೀಗೆ ವಿವಿಧಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ
ಬಿಜೆಪಿ ಸರಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿತ್ತು. ಆದರೆ ಪ್ರಸ್ತುತ ಸರಕಾರದ ಅವ„ಯಲ್ಲಿ ನಾವು ನಿರೀಕ್ಷಿಸಿದ ವೇಗ ಸಿಗಲಿಲ್ಲ. ಕಳೆದ 2 ವರ್ಷದಿಂದ ಮಹಾನಗರ ಪಾಲಿಕೆ ಅನುದಾನವನ್ನೇ ನೆಚ್ಚಿಕೊಂಡು ಕಾರ್ಯ ನಿರ್ವಹಿಸಿದ್ದೇವೆ. ಅಭಿವೃದ್ಧಿ ನಿಂತ ನೀರಾಗಲು ಬಿಡಲಿಲ್ಲ ಎಂದರು. ಮೇಯರ್ ಹಾಗೂ ಕಾರ್ಯಕರ್ತರ ಉತ್ತಮ ಶ್ರಮ, ಜನರ ಸಹಕಾರದಲ್ಲಿ ವಾರ್ಡ್ ಪ್ರಗತಿಯನ್ನು ಕಂಡಿದೆ ಎಂದರು.
ವಾರ್ಡ್ ಅನ್ನು ಪ್ರತಿನಿಧಿ ಸುತ್ತಿರುವ ಮೇಯರ್ ಮನೋಜ್ ಕುಮಾರ್ ಶಾಸಕರು ತಮ್ಮ ಅವಧಿ ಯಲ್ಲಿ ಎರಡೂವರೆ ಸಾವಿರ ಕೋಟಿಯಷ್ಟು ಅನುದಾನ ತಂದಿರುವುದು ದಾಖಲೆಯಾಗಿದೆ. ಇದರಿಂದ ಹೆಚ್ಚಿನ ಮೂಲಸೌಕರ್ಯಗಳ ಅಭಿವೃದ್ಧಿ ಸಾಕ್ಷ್ಯವಾಗಿದೆ. ಜನರ ಆಶೋತ್ತರ ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಾರ್ಡ್ ಬಿಜೆಪಿ ಪದಾಧಿಕಾ ರಿಗಳು , ಜೋಗಟ್ಟೆ ,ವಿವೇಕಾನಂದ ನಗರ ನಿವಾಸಿಗಳು ಉಪಸ್ಥಿತರಿದ್ದು ಶಾಸಕರು ಹಾಗೂ ಮೇಯರ್ ಅವರನ್ನು ಗೌರವಿಸಿದರು.