image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫೆ.8 ರಂದು ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪಶಸ್ತಿ ಪ್ರಧಾನ ಸಮಾರಂಭ..!

ಫೆ.8 ರಂದು ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪಶಸ್ತಿ ಪ್ರಧಾನ ಸಮಾರಂಭ..!

ಮಂಗಳೂರು: ಈ ಬಾರಿಯ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ 2025 ಫೆಬ್ರವರಿ ದಿನಾಂಕ 8. ಶನಿವಾರ ಸಂಜೆ 4 ಘಂಟೆಗೆ ಸರಿಯಾಗಿ ನಗರದ ಟಿವಿ ರಮಣ ಪೈ ಸಭಾಂಗಣ, ಕೊಡಿಯಾಲ್-ಬೈಲ್ ಇಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಧ್ಯಕ್ಷರಾದ ನಂದಗೋಪಾಲ್ ತಿಳಿಸಿದ್ದಾರೆ. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಅಂತರಾಜ್ಯ ಕೊಂಕಣಿ ನಾಟಕ ಮಹೋತ್ಸವದಲ್ಲಿ ಎರಡು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕಪ್ರಿಯರನ್ನು ಆಕರ್ಷಿಸಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರತಿಷ್ಟಿತ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ' ಪ್ರಶಸ್ತಿ ಪ್ರದಾನವೂ ನಡೆಯಲಿದೆ.

ನೆರೆಯ ಮಹಾರಾಷ್ಟ್ರ ರಾಜ್ಯದ ಶ್ರೀ ಸುಧಾಕರ ಭಟ್ ಇವರ ನೇತೃದ ಪ್ರಸಿದ್ದ ಕಲಾತಂಡ “ಆಮ್ಮಿ ರಂಗಕರ್ಮಿ, ಮುಂಬೈ" ಇವರು “ಪೋಸ್ಟ್ ಕಾರ್ಡ್" ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಕರ್ನಾಟಕ-ಕೇರಳ ರಾಜ್ಯಗಳನ್ನು ಪ್ರತಿನಿಧಿಸಿ, ಶ್ರೀ ಕಾಸರಗೋಡು ಚಿನ್ನಾ ಇವರ ನೇತೃತ್ವದ “ರಂಗ ಚಿನ್ನಾರಿ, ಕಾಸರಗೋಡು" ಇವರು ಅಭಿನಯಿಸುವ ಜನಪ್ರಿಯ “ಕರ್ಮಾಧೀನ” ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಹಿರಿಯ ರಂಗಕರ್ಮಿ ಶ್ರೀ ಗುಲ್ಯಾಡಿ ರಾಮದಾಸ್‌ ದತ್ತಾತ್ರೇಯ ಭಟ್ ಇವರು, ಈ ಬಾರಿಯ 'ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪ್ರಶಸ್ತಿ” ಸ್ವೀಕರಿಸಲಿದ್ದು,ಹಿರಿಯ ಸಾಹಿತಿ- ಅನುವಾದಕರಾಗಿರುವ ಡಾ ಗೀತಾ ಶೆಣೈ, ಇವರು ಈ ವರ್ಷದ "ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ” ಸ್ವೀಕರಿಸಲಿರುವರು.ದತ್ತ ನಿಧಿಯಿಂದ 1 ಲಕ್ಷ ರೂ ನಗದು ಘೋಷಿಸಲಾಗಿದ್ದು,   ಕೊಂಕಣಿ ಬಾಂಧವರು ಈ ನಾಟಕ ಮಹೋತ್ಸವದಲ್ಲಿ ಭಾಗವಹಿಸಿ ಕೊಂಕಣಿ ರಂಗಕಲೆಯನ್ನು   ಪ್ರೊತ್ಸಾಹಿಸ ಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಆರ್. ಕಾಮತ್, ರತ್ನಾಕ‌ರ್ ಕುಡುವ,ವಿಲಿಯಂ ಡಿಸೋಜ, ಎಅ.ಕಸ್ತೂರಿ ಮೋಹನ್,ಡಾ ದೇವಾದಾಸ್ ರವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ