ಪುತ್ತೂರು: ಪುತ್ತೂರಿನ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆಗಳಲ್ಲಿ ಒಂದಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಲೀಗ್ ಮಾದರಿಯ ನಾಲ್ಕು ಓವರ್ ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು.
ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಬಲರಾಮ ಆಚಾರ್ಯ ಹಾಗೂ ರಾಜಿ ಬಲರಾಮ ಆಚಾರ್ಯ ದೀಪ ಪ್ರಜ್ವಲನೆಗೊಳಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಜಿ. ಎಲ್. ಸಮೂಹ ಸಂಸ್ಥೆಗಳ ಜಿ.ಎಲ್. ಗ್ಲೋ, ಜಿ.ಎಲ್. ಪಾರ್ಥ, ಜಿ.ಎಲ್. ಪ್ರಾಚೀ, ಜಿ.ಎಲ್. ಹಾಸನ, ಜಿ.ಎಲ್. ಕುಶಾಲನಗರ ಒಟ್ಟು 5 ತಂಡಗಳು ಬಾಗವಹಿಸಿತ್ತು. ಹಾಸನ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಜಿ.ಎಲ್. ಪಾರ್ಥ ದ್ವಿತೀಯ ಹಾಗೂ ಜಿ.ಎಲ್. ಪ್ರಾಚೀ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಸಂಸ್ಥೆಯ ನಿರ್ದೇಶಕರಾದ ಶ್ರೀ ಸುಧನ್ವ ಆಚಾರ್ಯ, ಅರುಂಧತಿ ಆಚಾರ್ಯ ಹಾಗೂ ಶ್ರೀ ರಾಮ ಆಚಾರ್ಯ ಇವರ ಉಪಸ್ಥಿತಿಯಲ್ಲಿ ವಿಜೇತರನ್ನು ಅಭಿನಂದಿಸಲಾಯಿತು. ಇದರ ಜೊತೆ ಸಂಸ್ಥೆಯ ನಿರ್ದೇಶಕರಿಂದ 2 ತಂಡಗಳ ಪ್ರದರ್ಶನ ಪಂದ್ಯ ನಡೆಯಿತು.
ಸಂಸ್ಥೆಯ ಸಿಬ್ಬಂದಿಗಳು ಪಂದ್ಯಾಟದಲ್ಲಿ ಭಾಗವಹಿಸಿ ಖುಷಿಪಟ್ಟರು.