image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಿರಿಯರ ಮಾರ್ಗದರ್ಶನ ದಾರಿದೀಪ-ಅನಿಲ್ ರಾವ್

ಹಿರಿಯರ ಮಾರ್ಗದರ್ಶನ ದಾರಿದೀಪ-ಅನಿಲ್ ರಾವ್

ಮಂಗಳೂರು : ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಅವರ ಅನುಭವ ಹಾಗೂ ಮಾರ್ಗದರ್ಶನ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪ ಎಂದು ರೋಟರಿ ಸಂಧ್ಯಾ ಸುರಕ್ಷಾ ಜಿಲ್ಲಾ ಯೋಜನೆಯ ಚೇರ್ಮನ್ ಅನಿಲ್ ರಾವ್ ಹೇಳಿದರು.

ರೋಟರಿ ಜಿಲ್ಲೆ 3181  ದ.ಕ.ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಮತ್ತು ಮಂಥನ ಓಜಸ್ ಎನ್‌ಜಿಒ ಟ್ರಸ್ಟ್  ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಭಾನುವಾರ ರೆಡ್‌ಕ್ರಾಸ್‌ನ  ಪ್ರೇರಣಾ ಸಭಾಂಗಣದಲ್ಲಿ ಹಿರಿಯ ನಾಗರಿಕರಿಗೆ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಯಾಗಿದ್ದರು. ಮಂಥನ ಓಜಸ್ ಟ್ರಸ್ಟ್‌ ನ  ಗೌರವಾಧ್ಯಕ್ಷ  ನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸ್ಪರ್ಧೆಗಳ ತೀರ್ಪುಗಾರರಾಗಿ ಪ್ರತಿಭಾ ಸಾಲಿಯನ್, ಸ್ವರ್ಣಶ್ರೀ, ಲತಾ.ಕೆ. ಮತ್ತು ತನ್ಮಯ್  ಭಾಗವಹಿಸಿದ್ದರು. ಮಂಥನ ಓಜಸ್ ಟ್ರಸ್ಟ್ ನ‌ ಸಂಸ್ಥಾಪಕಿ ಮಂಗಳಾ ನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ