ಮಂಗಳೂರು: ಸಂಗೀತ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಆಕಾಶವಾಣಿಯ ಕಲಾವಿದೆ ಸಂಗೀತ ಬಾಲಚಂದ್ರ ಅವರು ಸಜ್ಜಾಗಿದ್ದಾರೆ. ಕಳೆದ 25 ವರ್ಷಗಳಿಂದ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮ 25 ವರ್ಷಗಳ ಸಂಗೀತ ಪಯಣದ ನೆನಪಿಗಾಗಿ 25 ಗಂಟೆಗಳ ಕಾಲ ನಿರಂತರವಾಗಿ 'ದಾಸರ ಪದ'ಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಭೀಮಾ ಜ್ಯುವೆಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿಬರುತ್ತಿರುವ ಈ ಐತಿಹಾಸಿಕ ಗಾಯನ ಕಾರ್ಯಕ್ರಮಕ್ಕೆ 'ಪಂಚವಿಂಶತಿ' ಎಂದು ಹೆಸರಿಸಲಾಗಿದೆ. ಮಹಿಳಾ ಗಾಯಕರೊಬ್ಬರು ಅತಿ ದೀರ್ಘ ಅವಧಿಗೆ, ಅಂದರೆ ಪ್ರಮುಖವಾಗಿ ದಾಸರ ಪದಗಳನ್ನೇ ಆಯ್ಕೆ ಮಾಡಿಕೊಂಡು ನಿರಂತರ 25 ಗಂಟೆಗಳ ಕಾಲ ಹಾಡುತ್ತಿರುವುದು ನಮ್ಮ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಮೊದಲ ಪ್ರಯತ್ನವಾಗಿದೆ.
ಉಡುಪಿಯ ಶ್ರೀ ಕೃಷ್ಣ ಮಠದ ಹತ್ತಿರವಿರುವ ಗೀತಾ ಮಂದಿರದ ಶ್ರೀ ಪುತ್ರಿ ನೃಸಿಂಹ ಸಭಾಂಗಣದಲ್ಲಿ ಈ ಕಾರ್ಯಕ್ರಮವು ಜರುಗಲಿದೆ. ಆಗಸ್ಟ್ 23, 2026ರ ಬೆಳಿಗ್ಗೆ 6:30ಕ್ಕೆ ಪ್ರಾರಂಭವಾಗುವ ಈ ವಿಶಿಷ್ಟ ಕಾರ್ಯಕ್ರಮವು ಆಗಸ್ಟ್ 24, 2026ರ ಬೆಳಿಗ್ಗೆ 7:30ರವರೆಗೆ ನಿರಂತರವಾಗಿ ಮುಂದುವರಿಯಲಿದೆ.
ಕಾರ್ಯಕ್ರಮದ ಪ್ರಮುಖ ವಿಶೇಷತೆಗಳು: