ದುಬೈ: ಇರಾನ್ನಲ್ಲಿ ತಮ್ಮ ವಿರುದ್ಧ ನಡಯುತ್ತಿರುವ ದಂಗೆ ಬಗ್ಗೆ ಎಚ್ಚರಿಕೆ ನೀಡಿರುವ ದೇಶದ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ, 'ಗಲಭೆಕೋರರನ್ನು ಸುಮ್ಮನಾಗಿಸಬೇಕು ಹಾಗೂ ಅವರನ್ನು ಅವರ ಸ್ಥಾನದಲ್ಲಿ ಇರಿಸಬೇಕು' ಎಂದು ಗುಡುಗಿದ್ದಾರೆ. ಗಲಭೆಗಳ ಬಗ್ಗೆ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಇರಾನ್ ದಂಗೆಯಲ್ಲಿ 10 ಪ್ರತಿಭಟನಾಕಾರರು ಅಸುನೀಗಿದ್ದಾರೆ. ಪ್ರತಿಭಟನಾಕಾರರನ್ನು ಕೊಂದರೆ ಹುಷಾರ್ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಗುಡುಗಿದ್ದರು.