image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಶಾಂತಿ ಮಾತುಕತೆ ವಿಫಲವಾಗಲು ಭಾರತವೇ ಕಾರಣ : ಪಾಕ್‌ ರಕ್ಷಣಾ ಸಚಿವ ಖವಾಜಾ ಆಸೀಫ್‌

ಶಾಂತಿ ಮಾತುಕತೆ ವಿಫಲವಾಗಲು ಭಾರತವೇ ಕಾರಣ : ಪಾಕ್‌ ರಕ್ಷಣಾ ಸಚಿವ ಖವಾಜಾ ಆಸೀಫ್‌

ಇಸ್ಲಮಾಬಾದ್: ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿ ನಡೆದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಕದನ ವಿರಾಮದ ಮಾತುಕತೆ ವಿಫಲವಾದ ಬೆನ್ನಲ್ಲೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್‌ ಅಫ್ಘಾನಿಸ್ತಾನದ ಮೇಲೆ 50 ಪಟ್ಟು ಹೆಚ್ಚಾಗಿ ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡುವ ಜೊತೆಗೆ ಅಫ್ಘಾನಿಸ್ತಾನ ಭಾರತದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಟರ್ಕಿಯಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಪಾಕಿಸ್ತಾನದ ಮಾಧ್ಯಮಗಳೊಂದಿಗೆ ಮಾತನಾಡಿದ ಖವಾಜಾ ಆಸೀಫ್‌ ಅಫ್ಘಾನಿಸ್ತಾನ ಭಾರತದ ಪ್ರತಿನಿಧಿಯಂತೆ ವರ್ತಿಸುತ್ತಿದೆ, ಒಂದು ವೇಳೆ ಮತ್ತೆ ಅಫ್ಘಾನ್ ಪಾಕಿಸ್ತಾನದ ಮೇಲೆ ಆಕ್ರಮಣ ನಡೆಸಲು ಮುಂದಾದರೇ ನಾವು ಅದರ ಮೇಲೆ 50ಪಟ್ಟು ಹೆಚ್ಚಿನ ದಾಳಿಯನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನ ಭಾರತದ ಕೈಯಲ್ಲಿನ ಗೊಂಬೆಯಂತೆ ಆಡುತ್ತಿದೆ ಎಂದು ಆರೋಪಿಸಿರುವ ಖವಾಜಾ ಆಸೀಫ್‌ ಮೇ ತಿಂಗಳಿನಲ್ಲಿ ನಡೆದ ಯುದ್ದದಲ್ಲಿ ಭಾರತ ಅನುಭವಿಸಿದ ಸೋಲಿನ ಪ್ರತಿಕಾರವನ್ನು ತೀರಿಸಿಕೊಳ್ಳಲು ಭಾರತ ಅಪ್ಘಾನಿಸ್ತಾನವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಪಾಕಿಸ್ತಾನದ ಮೇಲೆ ಯುದ್ದ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಅಲ್ಲದೇ ಪಾಕ್‌-ಅಫ್ಘಾನ್‌ ನಡುವಿನ ಶಾಂತಿ ಮಾತುಕತೆಯ ಬಗ್ಗೆ ಮಾತನಾಡಿದ‌ ಆಸೀಫ್ ನಾವು ಒಪ್ಪಂದ ಮಾಡಿಕೊಳ್ಳಲು ಇನ್ನೇನೂ ಹತ್ತಿರವಿದ್ದು, ಅಫ್ಘಾನಿಸ್ತಾನಕ್ಕೆ ಇದರ ಕುರಿತು ವರದಿ ಮಾಡುವ ಪ್ರತಿ ಬಾರಿ ಭಾರತದ ಹಸ್ತಕ್ಷೇಪದಿಂದ ನಾವು ಒಪ್ಪಂದ ಹಿಂತೆಗೆದುಕೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಭಾರತದ ವಿರುದ್ದ ಆರೋಪಿಸಿದ್ದಾರೆ. ಈ ಹಿಂದೆಯೂ ಪಾಕ್-ಅಫ್ಘಾನ್‌ ನಡುವಿನ ಸಂಘರ್ಷಕ್ಕೆ ಭಾರತವೇ ಕಾರಣ ಎಂದು ಆರೋಪಿಸಿದ್ದ ಪಾಕ್‌, ಅಫ್ಘಾನ್ ಭಾರತದ ಪರ ʼಪ್ರಾಕ್ಸಿ ವಾರ್‌ʼ ನಡೆಸುತ್ತಿದೆ ಎಂದು ಹೇಳಿತ್ತು.ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿ ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ, ಅಲ್ಲದೇ ತನ್ನ ಆಂತರಿಕ ವಿಷಯಗಳಿಗೆ ನೆರೆಹೊರೆಯವರನ್ನು ಹೊಣೆ ಮಾಡುವುದು ಪಾಕಿಸ್ತಾನಕ್ಕಿರುವ ಹಳೆಯ ಚಾಳಿ ಎಂದು ಕಟುವಾಗಿ ಟೀಕಿಸಿತ್ತು. ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವಿನ ಯುದ್ದಕ್ಕೆ ಬ್ರೇಕ್‌ ಹಾಕಲು ಟರ್ಕಿ ದೇಶದ ರಾಜಧಾನಿ ಇಸ್ತಾಂಬುಲ್‌ ನಲ್ಲಿ ನಡೆದ ಶಾಂತಿ ಮಾತುಕತೆ ಯಾವುದೇ ತಾರ್ಕಿಕ ಅಂತ್ಯ ಕಾಣದೇ ವಿಫಲವಾಗಿದೆ. ಇದಕ್ಕೆ ಎರಡು ದೇಶಗಳು ಒಬ್ಬರ ಮೇಲೆ ಇನ್ನೊಬ್ಬರು ಪರಸ್ಪರ ದೂಷಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಶಾಂತಿ ಸಭೆಗೂ ಮುನ್ನ ಇದೇ ಖವಾಜಾ ಆಸೀಫ್‌ ಒಂದು ವೇಳೆ ಟರ್ಕಿಯಲ್ಲಿ ನಡೆಯುವ ಶಾಂತಿ ಮಾತಿಕತೆ ಸಫಲವಾಗದಿದ್ದರೆ, ನಾನು ಅಫ್ಘಾನೊಂದಿಗೆ ಓಪನ್‌ ವಾರ್‌ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು, ಇನ್ನೂ ಈ ಬೆನ್ನಲ್ಲೇ ಮತ್ತೆ ಪಾಕ್-ಅಫ್ಘಾನ್‌ ನಡುವಿನ ಶಾಂತಿ ಮಾತುಕತೆ ವಿಫಲವಾಗುವುದಕ್ಕೂ ‌ ಭಾರತವೇ ಕಾರಣ ಎಂದು ಪಾಕ್‌ ಆರೋಪಿಸಿದ್ದು, ಮತ್ತೆ ಎರಡು ದೇಶಗಳ ನಡುವೆ ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

Category
ಕರಾವಳಿ ತರಂಗಿಣಿ