image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ನಿಮ್ಮ ಮೇಲೆ ಓಪನ್‌ ವಾರ್ : ಅಫ್ಘಾನಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ಪಾಕಿಸ್ತಾನ!

ನಿಮ್ಮ ಮೇಲೆ ಓಪನ್‌ ವಾರ್ : ಅಫ್ಘಾನಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ಪಾಕಿಸ್ತಾನ!

ಇಸ್ಲಾಮಬಾದ್ : ಅಫ್ಘಾನಿಸ್ತಾನ-ಪಾಕಿಸ್ತಾನ ಕದನ ವಿರಾಮ ಒಪ್ಪಂದ ಜಾರಿಯಾದ ಹಿನ್ನೆಲೆಯಲ್ಲಿ, ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿವೆ. ಆದರೆ ಮಾತುಕತೆ ಫಲಿತಾಂಶ ಹೊರಬರುವ ಮೊದಲೇ, ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ ನೇರ ಯುದ್ಧದ ಬೆದರಿಕೆ ಹಾಕಿದೆ. ಈ ಕುರಿತು ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್‌, "ಒಂದು ವೇಳೆ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳು ವಿಫಲವಾದರೆ, ನಾವು ಅಫ್ಘಾನಿಸ್ತಾನದೊಂದಿಗೆ ಓಪನ್‌ ವಾರ್‌ ಮಾಡಲು ಸಿದ್ಧರಾಗಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದಾರೆ. ಖವಾಜಾ ಆಸೀಫ್‌ ಅವರ ಈ ಹೇಳಿಕೆ, ಶಾಂತಿ ಮಾತುಕತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ಅಫ್ಘಾನಿಸ್ತಾನ-ಪಾಕಿಸ್ತಾನ ನಡುವೆ ಕತಾರ್‌ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆ ನಡೆಯುತ್ತಿತ್ತು. ಈಗ ಟರ್ಕಿ ರಾಜಧಾನಿ ಇಸ್ತಾಂಬುಲ್‌ಗೆ ಈ ಮಾರುಕತೆಗಳು ಶಿಫ್ಟ್‌ ಆಗಿವೆ. ಆದರೆ ಮಾತುಕತೆ ವಿಫಲವಾದರೆ ಅಫ್ಘಾನಿಸ್ತಾನದೊಂದಿಗೆ ನೇರ ಯುದ್ಧಕ್ಕೆ ಧುಮುಕುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸೀಫ್‌ ಹೇಳಿದ್ದಾರೆ. "ನಾವು ಅಫ್ಘಾನಿಸ್ತಾನದೊಂದಿಗೆ ಶಾಂತಿ ಬಯಸುತ್ತೇವೆ. ಆದರೆ ಶಾಂತಿ ಮಾತುಕತೆಯಲ್ಲಿ ಅಫ್ಘಾನಿಸ್ತಾನ ಉದ್ಧಟತನ ಮೆರೆದರೆ, ನಾವು ಅದರೊಂದಿಗೆ ಓಪನ್‌ ವಾರ್‌ ಮಾಡಲು ಹಿಂಜರಿಯುವುದಿಲ್ಲ" ಎಂದು ಖವಾಜಾ ಆಸೀಫ್‌ ಗುಡುಗಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತ ಪಾಕ್‌ ರಕ್ಷಣಾ ಸಚಿವರ ಹೇಳಿಕೆಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಪಾಕ್‌ ವಿರೋಧಿ ಭಯೋತ್ಪಾದಕ ಸಂಘಟನೆಗಳು, ಅಫ್ಘಾನಿಸ್ತಾನದ ನೆಲದಿಂದ ನಮ್ಮ ಮೇಲೆ ದಾಳಿ ಮಾಡುತ್ತಿವೆ ಎಂಬ ಆರೋಪವನ್ನು ಪುನರುಚ್ಚರಿಸಿದ ಖವಾಜ ಆಸೀಫ, ತಾಲಿಬಾನ್‌ ಆಡಳಿತಕ್ಕೆ ನಿಜಕ್ಕೂ ಶಾಂತಿ ಬೇಕಿದ್ದರೆ, ಮೊದಲು ಈ ಭಯೋತ್ಪಾದಕ ಸಂಘಟನೆಗಳಿಗೆ ತನ್ನ ನೆಲದಲ್ಲಿ ಆಶ್ರಯ ನೀಡುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.

ಸದ್ಯ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ-ಪಾಕಿಸ್ತಾನ ಶಾಂತಿ ಮಾತುಕತೆಗಳು, ದೀರ್ಘಾವಧಿಯ ದೋಹಾ ಕದನ ವಿರಾಮ ಒಪ್ಪಂದವನ್ನು ಜಾರಿಗೊಳಿಸಲು ಒಂದು ಕಾರ್ಯವಿಧಾನವನ್ನು ರೂಪಿಸುವ ಉದ್ದೇಶ ಹೊಂದಿದೆ. ಕದನ ವಿರಾಮ ಒಪ್ಪಂದ ಜಾರಿಯಾದ ಮೇಲೆ ಉಭಯ ಬಣಗಳ ನಡುವೆ ಇದುವರೆಗೂ ಯಾವುದೇ ಕಾದಾಟ ನಡೆದಿಲ್ಲವಾದರೂ, ಖವಾಜಾ ಆಸೀಫ್‌ ಅವರ ಹೇಳಿಕೆಗಳು, ಕಾದಾಟಕ್ಕೆ ಪ್ರೇರಣೆ ನೀಡುವಂತಿವೆ. ಈ ಹಿಂದೆ "ಅಫ್ಘಾನಿಸ್ತಾನಕ್ಕೆ ಭಾರತ ಬೆಂಬಲ ನೀಡುತ್ತಿದೆ" ಎಂದು ಆರೋಪಿಸಿದ್ದ ಖವಾಜಾ ಆಸೀಫ್‌, ಭಾರತದ 2 ಫ್ರಂಟ್‌ ವಾರ್‌ ಯೋಜನೆಯನ್ನು ವಿಫಲಗೊಳಿಸುವುದಾಗಿ ಹೇಳಿದ್ದರು. ಆದರೆ ಈಗ ಅಫ್ಘಾನಿಸ್ತಾನ್ಕಕೆ ಓಪನ್‌ ವಾರ್‌ ಬೆದರಿಕೆ ಹಾಕುವ ಮೂಲಕ, ಪಾಕಿಸ್ತಾನಕ್ಕೆ ಮಿಲಿಟರಿ ಸಂಘರ್ಷಗಳು ಕೊನೆಗಾಣುವುದು ಬೇಕಿಲ್ಲ ಎಂಬುದನ್ನು ರಕ್ಷಣಾ ಸಚಿವ ಖವಾಜಾ ಆಸೀಫ್‌ ಸಾಬೀತು ಮಾಡಿದ್ದಾರೆ.

Category
ಕರಾವಳಿ ತರಂಗಿಣಿ