image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

....ನಿವೇದನೆ....

....ನಿವೇದನೆ....

ನಿನ್ನ ಅಮಲಿನಲಿ ಅಮರಿಕೊಂಡ ಆಸೆಗಳಿಗೆ ಏನು ಹೇಳಲಿ ಉತ್ತರ?

ನೀನು ಬರದೇ ಹತ್ತಿರ|                                      ಖಾಯಂ ಆಗಿ ಕಾಯ್ದುಕೊಂಡರು ಅಂತರ||        ನಿನಗಾಗಿ ಹಾತೊರೆಯುವ ಆತುರ.!

ಹೀಗೇಕೆ ಈ ತರ ಎಂದು ಉತ್ತರ ಸಿಗಬಹುದು ನೀ ಸಿಕ್ಕಿದ ನಂತರ||

ನಿರ್ಬಂಧಗಳ ನಡುವೆಯೂ ನೀ ಪ್ರೇಮ ಪ್ರಬಂಧವಾದೆ ||ಸಂಬಂಧಗಳ ನಡುವೆ ನೀ ನನ್ನ ಆನಂದವಾದೆ

ಕಾಡುವ  ಕನ್ನಿಕೆ ನೀನು ಕಾವ್ಯವಾದೆ|| ಪದೇ ಪದೇ ಮೂಡುವ ಬಿಂಬ ನಿನ್ನದೇ||

ಕನಸಲ್ಲಿಯೂ ನಿನ್ನದೇ ಕಾರುಬಾರು||              ಜನರಿದ್ದರೇನು ಸಾವಿರಾರು                                            ನೀ ಜಾತ್ರೆ ನಡುವಿನ ತೇರು,                                  ನೀನು ತುಂಬಾ ಹುಷಾರು,

ಸೂಚನೆ ಕೊಡುವುದೇ ಇಲ್ಲ ಒಂದು ಚೂರು              ನಿನ್ನ ಕುಡಿ ನೋಟಗಳನ್ನೆಲ್ಲ ಕೂಡಿಟ್ಟು ಕೊಂಡಿದ್ದೇನೆ ನಿನ್ನದೇ ಕಿರುನಗೆಯ ಕಪಾಟಿನಲ್ಲಿ,

ಈ ಬೆಚ್ಚನೆ ಭಾವನೆಗಳು ಮುಗಿಲೇಳುವ ಮುನ್ನ.   ಇನ್ನೆಷ್ಟು ದಿನ ಆರಗಿಸಿಕೊಳ್ಳಲಿ ಆಸೆಗಳ ಆಶಯ| ತೆಗೆದುಕೊಂಡು  ನಿರ್ಣಯ||

ಮಾಡಿಕೊಳ್ಳಲೇ ನಿವೇದನೆ? ಸಿಗಬಹುದಾ ನಿನ್ನಿಂದ ಅನುಮೋದನೆ?!!  

✍ ಶಿವರಾಜ್ ಗುಬ್ಬಿ.

Category
ಕರಾವಳಿ ತರಂಗಿಣಿ