ಚಿಕ್ಕಬಳ್ಳಾಪುರ: ನಾಳೆ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಸಚಿವ ಸಂಪುಟದ 13ನೇ ಸಭೆಯನ್ನು ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಡೆಸಲು ಸರ್ಕಾರ ತಿರ್ಮಾನ ಮಾಡಿತ್ತು. ಸಚಿವ ಸಂಪುಟ ಸಭೆಗೆ ನಂದಿಗಿರಿಧಾಮ ಸಿದ್ಧಗೊಂಡಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಮಾಡಲಾಗಿತ್ತು. ಸಚಿವ ಸಂಪುಟ ಸಭೆ ನಡೆಸಲು ಮಯೂರ ಪೈನ್ ಟಾಪ್ ಹಾಲ್ ಆಧುನೀಕರಣಗೊಳಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ನಂದಿಗಿರಿಧಾಮದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಯಾವ ಕಾರಣಕ್ಕೆ ಸ್ಥಳಾಂತರಿಸಲಾಗಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಸಚಿವ ಸಂಪುಟ ಸಭೆ ನಡೆಯುವ ಕಾರಣಕ್ಕೆ ಇಂದಿನಿಂದ ಎರಡು ದಿನ ನಂಗಿರಿಧಾಮಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು. ಬೆಟ್ಟದಲ್ಲಿನ ರೂಮ್ಗಳನ್ನು ಬಾಡಿಗೆ ಕೊಡುವುದಕ್ಕೂ ನಿರ್ಬಂಧಿಸಲಾಗಿತ್ತು.