image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಟಿಕೆಟ್​​​​ ಕೌಂಟರ್‌ಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆಯಿಂದ ಎಟಿವಿಎಂ ಬಳಕೆ ಜಾರಿಗೆ

ಟಿಕೆಟ್​​​​ ಕೌಂಟರ್‌ಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆಯಿಂದ ಎಟಿವಿಎಂ ಬಳಕೆ ಜಾರಿಗೆ

ಹುಬ್ಬಳ್ಳಿ: ಟಿಕೆಟ್​​​​ ಕೌಂಟರ್‌ಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ ಎಟಿವಿಎಂ ಬಳಕೆಯನ್ನು ಜಾರಿಗೆ ತಂದಿದೆ. ಹುಬ್ಬಳ್ಳಿ ವಿಭಾಗದ ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು (Automatic Ticket Vending Machine) ಅಳವಡಿಸಲಾಗಿದೆ. ಭಾರತೀಯ ರೈಲ್ವೆಯ ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಪ್ರೋತ್ಸಾಹದ ಭಾಗವಾಗಿ ಎಟಿವಿಎಂ ಅಳವಡಿಸಿದ್ದು, ಪ್ರಸ್ತುತ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ 8, ಬೆಳಗಾವಿ, ಬಳ್ಳಾರಿಯಲ್ಲಿ ತಲಾ 3, ಬಾಗಲಕೋಟೆ, ವಿಜಯಪುರ, ಗದಗ ಮತ್ತು ಹೊಸಪೇಟೆಯಲ್ಲಿ ತಲಾ 2, ಧಾರವಾಡ, ಕೊಪ್ಪಳ ಮತ್ತು ಘಟಪ್ರಭಾದಲ್ಲಿ ತಲಾ 1ರಂತೆ ಒಟ್ಟು 25 ಎಟಿವಿಎಂ ಕಾರ್ಯ ನಿರ್ವಹಿಸುತ್ತಿವೆ‌.

ಪ್ರಯಾಣಿಕರಲ್ಲಿ ಬಹುಪಾಲು ಮಂದಿ ಕಾಯ್ದಿರಿಸಲಾಗದ ಟಿಕೆಟ್​ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೆಲವೊಮ್ಮೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರು ಸಾಲಿನಲ್ಲಿ ನಿಲ್ಲದೆ, ಈ ಯಂತ್ರದಿಂದ ಸುಲಭ ಮತ್ತು ತ್ವರಿತವಾಗಿ ಟಿಕೆಟ್​ ಪಡೆಯಲು ಸಹಕಾರಿಯಾಗಿದೆ. ಒಟ್ಟು 31 ಎಟಿವಿಎಂ ಸಹಾಯಕರನ್ನು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಯಂತ್ರಗಳನ್ನು ಬಳಸುವಲ್ಲಿ ನೆರವಾಗುವಂತೆ ನೇಮಕ ಮಾಡಲಾಗಿದೆ. ಇವರು ತಮಗೆ ನೀಡಲಾದ ಫೆಸಿಲಿಟೇಟರ್​ ಸ್ಮಾರ್ಟ್ ಕಾರ್ಡ್ ಮೂಲಕ ಟಿಕೆಟ್​ ನೀಡುವವರು ಈ ಸಹಾಯಕರು ನಿವೃತ್ತ ರೈಲ್ವೆ ನೌಕರರಾಗಿದ್ದು, ಅಧಿಕಾರಿಗಳಿಂದ ನೇಮಕಗೊಂಡ ಸಮಿತಿಯಿಂದ ಆಯ್ಕೆಯಾಗಿರುತ್ತಾರೆ.

ಈ ಯಂತ್ರದಿಂದ ಮಾಸಿಕ (ಸೀಸನ್​​​​) ಟಿಕೆಟ್​​​​, ಪ್ಲಾಟ್‌ಫಾರ್ಮ್​​, ಕಾಯ್ದಿರಿಸದ ಟಿಕೆಟ್​​​​ ಪಡೆಯಬಹುದಾಗಿದೆ. ವಿಶೇಷವಾಗಿ ಸ್ಮಾರ್ಟ್​​ ಕಾರ್ಡ್​​​ ರೀತಿ ರಿಚಾರ್ಜ್​ ಕಾರ್ಡ್​ ಇಲ್ಲಿ ಬಳಸಿ, ಸಂದರ್ಭಕ್ಕೆ ತಕ್ಕಂತೆ ಕಾರ್ಡ್​​ ಸದ್ಬಳಕೆ ಮಾಡಬಹುದು. ಈ ಯಂತ್ರದಲ್ಲಿ QR ಕೋಡ್​​ ಸ್ಕ್ಯಾನ್​​ ಮಾಡಿ ಟಿಕೆಟ್​​​​ ಪಡೆಯುವ ಆಧುನಿಕ ವ್ಯವಸ್ಥೆ ಇರುತ್ತದೆ. ಈ ಯಂತ್ರದಿಂದ ಕಾಯ್ದಿರಿಸದ ಟಿಕೆಟ್ ಪಡೆಯುವ ಪ್ರತಿ ಪ್ರಯಾಣಿಕರಿಗೆ 150 ಕಿಲೋ ಮೀಟರಿಗೆ 3%, 150ಯಿಂದ 500 ಕಿಲೋ ಮೀಟರ್​ಗೆ​ 2% ಮತ್ತು 500 ಕಿಲೋ ಮೀಟರ್​ಗಿಂತ ಹೆಚ್ಚಿನ ದೂರದ ಪ್ರಯಾಣ ಮಾಡಲು ಟಿಕೆಟ್ ಪಡೆದವರಿಗೆ 1% ರಿಯಾಯಿತಿ ಅವರ ಚಾಲಿತ ಸ್ಮಾರ್ಟ್ ಕಾರ್ಡ್​ಗೆ ಸಂದಾಯವಾಗುತ್ತದೆ. ಈ ರಿಯಾಯಿತಿ ಅನುಕೂಲತೆ ಯಂತ್ರ ಚಾಲಿತ ಫೆಸಿಲಿಟೇಟರ್‌ ಅವರಿಗೂ ಸಹ ದೊರೆಯುತ್ತದೆ.

Category
ಕರಾವಳಿ ತರಂಗಿಣಿ