ಕೇರಳಂ : ಮುಂಬರುವ 2026 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪೆರವೂರಿನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಯೊಂದಿಗೆ ಆಡಳಿತಾರೂಢ ಎಲ್ಡಿಎಫ್ ರಹಸ್ಯ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಆರೋಪ ಮಾಡಿದರು. ಚುನಾವಣೆ ಸಮೀಪಿಸುತ್ತಿರುವಂತೆಯೇ ಎಲ್ಡಿಎಫ್ ಮತ್ತು ಬಿಜೆಪಿ ನಡುವೆ ರಹಸ್ಯ ಒಪ್ಪಂದ ನಡೆದಿದೆ. ಶಬರಿಮಲೆಯಲ್ಲಿ ಭಾರೀ ಕಳ್ಳತನವನ್ನು ನೋಡಿದ್ದೇವೆ, ಆದರೆ ಪ್ರಧಾನಿಯಿಂದ ಒಂದೇ ಒಂದು ಮಾತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ನಾನು ಈಗ ಕಳೆದ ಒಂದು ವರ್ಷದಿಂದ ವಯನಾಡ್ ಸಂಸದೆಯಾಗಿದ್ದೇನೆ, ಮತ್ತು ನೀವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಹೋರಾಟಗಳನ್ನು ನಾನು ತುಂಬಾ ಹತ್ತಿರದಿಂದ ನೋಡುತ್ತೇನೆ. "ನನಗೆ ಎದುರಾಗುವ ಜನರು ಸುಶಿಕ್ಷಿತರು. ನಾನು ಕೇರಳದಲ್ಲಿ ಸುಶಿಕ್ಷಿತರಾಗಿರುವ ಯುವಕರನ್ನು ಭೇಟಿಯಾದಾಗ, ಅವರಿಗೆ ಉದ್ಯೋಗವಿಲ್ಲ ಎಂಬ ವಿಚಾರ ತಿಳಿದಿದ್ದೇನೆ ಎಂದರು.