ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರನ್ನ "ಸಂಧಾನ ಮಾಡಿಕೊಂಡ ಚಾಚಾ" ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಲೇವಡಿ ಮಾಡಿದ್ದಾರೆ. ಅಲ್ಲದೆ, ಇವರ ಆಡಳಿತ ಅವಧಿಯಲ್ಲಿ ಭಾರತದ ಭದ್ರತೆ ವಿದೇಶಿ ಶಕ್ತಿಗಳ ಕೈಯಲ್ಲಿತ್ತು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಸಂಬಿತ್ ಪಾತ್ರ, 1960 ಮತ್ತು 70ರ ದಶಕದಲ್ಲಿ ನೆಹರೂ ಅವರ ಸಚಿವಾಲಯವು ವಿದೇಶಿ ಗುಪ್ತಚರ ಸಂಸ್ಥೆಗಳ ಕೇಂದ್ರವಾಗಿತ್ತು. ನೆಹರೂ ಅವರ ವಿಶೇಷ ಸಹಾಯಕ ಅಥವಾ ಕಾರ್ಯದರ್ಶಿಯಾಗಿದ್ದ ಎಂ.ಒ. ಮಥಾಯ್ ಅವರು ಅಮೆರಿಕದ ಸಿಐಎ (CIA) ಏಜೆಂಟ್ ಆಗಿದ್ದರು ಎಂದು ಪಾತ್ರ ಹೇಳಿದ್ದಾರೆ. ಅದೇ ಸಮಯದಲ್ಲಿ ರಷ್ಯಾದ ಕೆಜಿಬಿ ಏಜೆಂಟ್ಗಳು ಕೂಡ ನೆಹರೂ ಕಚೇರಿಯಲ್ಲಿ ಸಕ್ರಿಯರಾಗಿದ್ದರು. ಯಾವುದೇ ರಹಸ್ಯ ದಾಖಲೆ ವಿದೇಶಿ ಶಕ್ತಿಗಳಿಗೆ ಬೇಕೆಂದರೂ ನೆಹರೂ ಆಡಳಿತದಲ್ಲಿ ಸುಲಭವಾಗಿ ಸಿಗುತ್ತಿತ್ತು. ನೆಹರೂ ಏಕೆ ಭಾರತದ ಭದ್ರತೆಯೊಂದಿಗೆ ಇಂತಹ ಸಂಧಾನ ಮಾಡಿಕೊಂಡರು ಎಂದು ಪಾತ್ರ ಪ್ರಶ್ನಿಸಿದ್ದಾರೆ.
ನೆಹರೂ ಅವರ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ ಬಿಜೆಪಿ ನಾಯಕ, ನೆಹರೂ ಭಾರತದ ಭೂಭಾಗಗಳನ್ನು ಶತ್ರು ರಾಷ್ಟ್ರಗಳಿಗೆ ಹಂಚಿದ್ದಾರೆ ಎಂದು ದೂರಿದ್ದಾರೆ. ಪಂಚಶೀಲ ಒಪ್ಪಂದದ ಹೆಸರಿನಲ್ಲಿ ನೆಹರೂ ಅವರು ಟಿಬೆಟ್ ಅನ್ನು ಚೀನಾಗೆ ಉಡುಗೊರೆಯಾಗಿ ನೀಡಿದರು. ಅಕ್ಷಯ್ ಚಿನ್ನಲ್ಲಿ ಚೀನಾ ರಸ್ತೆ ನಿರ್ಮಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ, ನೆಹರೂ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರು. ನೆಹರೂ ಚೀನಾವನ್ನು ಉಳಿಸಲು ಪ್ರಯತ್ನಿಸುತ್ತಿದ್ದರು ಎಂದು ಪಾತ್ರ ಆರೋಪಿಸಿದ್ದಾರೆ. ತಮ್ಮ ಸಂಬಂಧಿ ಜನರಲ್ ಬಿ.ಎಂ. ಕೌಲ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿ, ತಪ್ಪು ನೀತಿಗಳನ್ನು ಅನುಸರಿಸಿದ್ದರಿಂದಲೇ 1962ರಲ್ಲಿ ಭಾರತ ಚೀನಾ ವಿರುದ್ಧ ಸೋಲಬೇಕಾಯಿತು ಎಂಬುದು ಬಿಜೆಪಿ ಸಂಸದ ಕಿಡಿಕಾರಿದ್ದಾರೆ.
1. ವಿದೇಶಿ ಏಜೆಂಟ್ಸ್ ಎಂ.ಒ. ಮಥಾಯ್ ಅಮೆರಿಕದ ಏಜೆಂಟ್ ಆಗಿ ನೆಹರೂ ಕಚೇರಿಯಲ್ಲಿದ್ದರು.
2. ಭೂಮಿ ಹಸ್ತಾಂತರ ಟಿಬೆಟ್ ಅನ್ನು ಚೀನಾಗೆ ಮತ್ತು ಬೆರುಬರಿಯನ್ನು ಪಾಕಿಸ್ತಾನಕ್ಕೆ ನೀಡಲಾಯಿತು.
3. ಯುದ್ಧದ ವೈಫಲ್ಯನೆಹರೂ ಅವರ ಸ್ವಜನಪಕ್ಷಪಾತದಿಂದ 1962ರ ಯುದ್ಧದಲ್ಲಿ ಸೋಲಾಯಿತು.
4. ರಹಸ್ಯ ದಾಖಲೆಭಾರತದ ಗುಪ್ತಚರ ಮಾಹಿತಿ ಅಮೆರಿಕ ಮತ್ತು ರಷ್ಯಾಕ್ಕೆ ಮುಕ್ತವಾಗಿತ್ತು.
5. ಲಂಚದ ಆರೋಪಭೂಮಿ ನೀಡಲು ನೆಹರೂ ಅವರು ವಿದೇಶಗಳಿಂದ ಲಂಚ ಪಡೆದಿದ್ದರೇ ಎಂಬ ಪ್ರಶ್ನೆ.
ಬೆರುಬರಿ ಪಾಕಿಸ್ತಾನಕ್ಕೆ ಹಸ್ತಾಂತರ. ಪಶ್ಚಿಮ ಬಂಗಾಳ ಸರ್ಕಾರದ ಅನುಮತಿ ಇಲ್ಲದೆ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿ ನೆಹರೂ ಅವರು ಬೆರುಬರಿ ಪ್ರದೇಶವನ್ನು ಪಾಕಿಸ್ತಾನಕ್ಕೆ ನೀಡಿದರು. 9ನೇ ಸಂವಿಧಾನ ತಿದ್ದುಪಡಿಯ ಮೂಲಕ ಭಾರತದ ಭೂಮಿಯನ್ನು ಪರಕೀಯರಿಗೆ ನೀಡಿದ ನೆಹರೂ ಅವರ ಕ್ರಮದಿಂದಾಗಿ ಭಾರತ ಇಂದಿಗೂ ಸಂಕಷ್ಟ ಅನುಭವಿಸುತ್ತಿದೆ ಎಂದು ಪಾತ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.