ಮಂಗಳೂರು: ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಡಾ| ವೈ ಭರತ್ ಶೆಟ್ಟಿಯವರು ಕ್ಷೇತ್ರದಲ್ಲಿ ಪ್ರಥಮ ಅವಧಿಯಲ್ಲಿ 2200 ಕೋಟಿಗೂ ಹೆಚ್ಚಿನ ಅನುದಾನವನ್ನು ಮಂಗಳೂರು ಉತ್ತರ ಕ್ಷೇತ್ರಕ್ಕೆ ತಂದು ಸಮಗ್ರ ಅಭಿವೃದ್ಧಿ ಮಾಡಿದ ಅಭಿವೃದ್ಧಿಯ ಹರಿಕಾರ ವಿಧಾನ ಸಭೆಯ ಬಾವಿಯಲ್ಲಿ ಇಳಿದು ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಸ್ವೀಕರಿಸುವ ಮನಸ್ಥಿತಿ ತಮಗೆ ಇರಬೇಕು. ತಾವು ಸರಕಾರದ ಭಾಗವಲ್ಲ, ನೀವು ಸರಕಾರದ ಪ್ರತಿನಿಧಿಯಾಗಿ ವರ್ತಿಸಿ ಅಮಾನತು ಮಾಡಿದ ನಿರ್ಧಾರ ಇಡೀ ರಾಜ್ಯದ ಜನತೆ ತಲೆತಗ್ಗಿಸುವ ರೀತಿ ಆಗಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಎಂದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾನ್ಯ ಸ್ಪೀಕರ್ರವರೇ ತಾವು ಶಿಸ್ತಿನ ಬಗ್ಗೆ ಮಾತನಾಡುತ್ತೀರಿ. ಆದರೂ ನೀವು ಎರಡು ಬಾರಿ ಅಮಾನತು ಆಗಿದ್ದೀರಿ. ಅದನ್ನು ನಾವು ಮರೆತಿಲ್ಲ. ಆಗ ಎಲ್ಲಿ ಹೋಗಿತ್ತು ನಿಮ್ಮ ಈ ಮಾತುಗಳು?. ಶಾಸಕರು 'ಹನಿಟ್ರಾಪ್ನ ಬಗ್ಗೆ ಮಾತನಾಡುತ್ತಿರುವಾಗ ನಿಮ್ಮದೇ ಸಚಿವರು ಧ್ವನಿಗೂಡಿಸಿದ್ದರು. ಆಗ ಅದನ್ನು ಸಮರ್ಥವಾಗಿ ಎದುರಿಸುವ ಬದಲು ರಾಜ್ಯದ 18 ಶಾಸಕರನ್ನು ಅಮಾನತು ಮಾಡಿದಾಗ ರಾಜ್ಯದ ಜನತೆ ನಿಮ್ಮ ನಾಟಕೀಯ ರಾಜಕೀಯವನ್ನು ನೋಡುತ್ತಿದ್ದಾರೆ.
ಸದನದ ಬಾವಿ ಪ್ರತಿಭಟಿಸಲು ಇರುವ ಸ್ಥಳ ನಿಮಗೆ ನೆನಪಿರಲಿ ಸ್ಪೀಕರ್ರವರೇ. ಅಂದು ಸ್ಪೀಕರ್ರವರನ್ನು ಕುತ್ತಿಗೆಯ ಪಟ್ಟಿ ಎಳೆದು ಅವಮಾನ ಮಾಡಿದ ಕಾಂಗ್ರೆಸ್ನ ನೀಚ ಬುದ್ದಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಶಾಸಕರಾದ ಡಾ. ಭರತ್ ಶೆಟ್ಟಿಯವರ ಅಮಾನತನ್ನು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟಕ್ಕೆ ನಾವು ಇಳಿಯಲಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಿಲಕ್ ರಾಜ್ ಕೃಷ್ಣಾಪುರ, ಭರತ್ ರಾಜ್ ಕೃಷ್ಣಾಪುರ, ಪೂಜಾ ಪೈ, ಹರ್ಷಿತ್ ನೋಂಡಾ, ಸಂದೀಪ್ ಪಚ್ಚನಾಡಿ ಮತ್ತು ರಣದೀಪ್ ಕಾಂಚನ್ ಉಪಸ್ಥಿತರಿದ್ದರು.