image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೇರಿಕಾದಿಂದ ಗಡಿಪಾರಾದ ಭಾರತೀಯರು : ಚರ್ಚೆಗೆ ಪ್ರತಿಪಕ್ಷಗಳ ಬಿಗಿ ಪಟ್ಟು

ಅಮೇರಿಕಾದಿಂದ ಗಡಿಪಾರಾದ ಭಾರತೀಯರು : ಚರ್ಚೆಗೆ ಪ್ರತಿಪಕ್ಷಗಳ ಬಿಗಿ ಪಟ್ಟು

ನವದೆಹಲಿ: ಸಂಸತ್​​ನ ಬಜೆಟ್​ ಅಧಿವೇಶನದಲ್ಲಿಂದು ಅಮೆರಿಕದಿಂದ ಗಡೀಪಾರಾದ ಭಾರತೀಯರ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳ ನಾಯಕರು ಪಟ್ಟು ಹಿಡಿದರು. ಹೀಗಾಗಿ ಎರಡೂ ಸದನಗಳಲ್ಲಿ ಗದ್ದಲ ಏರ್ಪಟ್ಟಿತು. ಅಮೆರಿಕದಿಂದ ಗಡಿಪಾರಾಗಿರುವ ಭಾರತೀಯರಿಗೆ ಘನತೆ ಕಾಪಾಡುವ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಕುರಿತು ಪ್ರತಿಪಕ್ಷಗಳು ಧ್ವನಿ ಎತ್ತಿದವು. ಇದರಿಂದ ಲೋಕಸಭೆಯನ್ನು ಮುಂದೂಡಲಾಯಿತು.

ದೇಶ ಮತ್ತು ವಿದೇಶಗಳಲ್ಲಿ ಪ್ರತಿಯೊಬ್ಬ ಭಾರತೀಯನ ಘನತೆ ಕಾಪಾಡುವ ಕುರಿತು ಆಯಾಯ ದೇಶಗಳು ಗಮನ ಹರಿಸುವಂತೆ ಮನವರಿಕೆ ಮಾಡಿಕೊಡಬೇಕಾದ ಅವಶ್ಯಕತೆ ಇದೆ. ಈ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಲೋಕಸಭಾ ಕಾಂಗ್ರೆಸ್​ ಉಪ ನಾಯಕ ಗೌರವ್​ ಗೊಗೊಯ್​ ಮನವಿ ಸಲ್ಲಿಸಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನಚಕಮಕಿಗೆ ಕಾರಣವಾಯಿತು. ಸದನ ಮುಂದೂಡಿಕೆ ಆಗಿ ಸೇರಿದಾಗಲೂ ಪ್ರತಿಪಕ್ಷದ ಸದಸ್ಯರು ಇದೇ ವಿಚಾರದ ಕುರಿತು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸ್ಪೀಕರ್​ ಓಂ ಬಿರ್ಲಾ, ಸರ್ಕಾರವೂ ಅತ್ಯಂತ ಕಾಳಜಿಯುತವಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣನೆ ಮಾಡಲಿದೆ. ಇದು ಕಳವಳಕಾರಿ ವಿಷಯವಾಗಿದ್ದು, ಜತೆ ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಸರ್ಕಾರವೂ ಈ ವಿಚಾರದಲ್ಲಿ ಗಂಭೀರವಾಗಿದೆ. ವಿದೇಶಗಳು ಕೂಡ ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತವೆ. ಈ ಹಿನ್ನಲೆ ಈ ವಿಚಾರವನ್ನು ಮಾತನಾಡಿ, ಇದೀಗ ಪ್ರಶ್ನೋತ್ತರ ಕಲಾಪ ಸರಾಗವಾಗಿ ನಡೆಯಲು ಅನುವು ಮಾಡಿ ಕೊಡಿ ಎಂದರು.

ರಾಜ್ಯಸಭೆಯಲ್ಲಿ ಸಂಸದರನ್ನು ಸಮಾಧಾನ ಪಡಿಸಲು ಸ್ಪೀಕರ್​ ಜಗದೀಪ್​ ದನಕರ್​​ ಹರಸಾಹಸ ಪಟ್ಟರು. ಗದ್ದಲ ಹೆಚ್ಚಾಗಿದ್ದರಿಂದ ಸದನದ ಕಲಾಪವನ್ನು ಮುಂದೂಡಿದರು.

ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಈ ವಿಚಾರ ಕುರಿತು ನನ್ನ ಚೆಂಬರ್​ನಲ್ಲಿ ಮಾತನಾಡಿದ್ದಾರೆ. ಅವರು ಸದನದಲ್ಲಿ ಈ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎಂದು ಕಿರಣ್​ ರಿಜಿಜು ಕೂಡ ಸದನದ ಗಮನಕ್ಕೆ ತಂದರು.

ಇದಾದ ಬಳಿಕ ಮಾತನಾಡಿದ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿ. ಸರ್ಕಾರಕ್ಕೆ ಈ ವಿಚಾರವಾಗಿ ಹೇಳಿಕೆ ನೀಡಲು ನಿರ್ದೇಶಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.

Category
ಕರಾವಳಿ ತರಂಗಿಣಿ