image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಧಾನಸಭೆಯಿಂದ ಶಾಸಕರನ್ನು ಬೇಕಾದರೆ ಹೊರಗೆ ಹಾಕಬಹುದು, ಆದರೆ ನಾಯಿಗಳನ್ನ ವಿಧಾನಸೌಧದಿಂದ ಹೊರ ಹಾಕಕ್ಕಾಗಲ್ಲ- ಯು ಟಿ ಖಾದರ್ ಬೇಸರ

ವಿಧಾನಸಭೆಯಿಂದ ಶಾಸಕರನ್ನು ಬೇಕಾದರೆ ಹೊರಗೆ ಹಾಕಬಹುದು, ಆದರೆ ನಾಯಿಗಳನ್ನ ವಿಧಾನಸೌಧದಿಂದ ಹೊರ ಹಾಕಕ್ಕಾಗಲ್ಲ- ಯು ಟಿ ಖಾದರ್ ಬೇಸರ

ಮಂಗಳೂರು: ವಿಧಾನಸೌಧದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣ ಬಗ್ಗೆ ಶೀಘ್ರದಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದ‌ರ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸೌಧದ ಸುತ್ತಮುತ್ತ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ವಿಧಾನಸೌಧದಲ್ಲಿ ರೆಡ್ ಕಾರ್ಪೆಟ್ ನಲ್ಲಿಯೇ ಮಲಗಿರುತ್ತದೆ. ಈ ನಾಯಿಗಳ ಬಗ್ಗೆ ಪರ ವಿರೋಧ ದೂರುಗಳು ಬಂದಿದೆ ಎಂದರು. ನನಗೆ ಶಾಸಕರನ್ನು ವಿಧಾನಸಭೆಯಿಂದ ಹೊರಗೆ ಕಳುಹಿಸುವ ಅಧಿಕಾರವಿದೆ. ಆದರೆ ಈ ಬೀದಿ ನಾಯಿಗಳನ್ನು ಹೊರಗೆ ಕಳುಹಿಸುವಂತಿಲ್ಲ. ಅವುಗಳ ಹಕ್ಕುಗಳನ್ನು ಗೌರವಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರಾಣಿ ದಯಾ ಸಂಘದವರನ್ನೂ ಕರೆಸಿ ಸಮಾಲೋಚನೆ ನಡೆಸಿ ಕ್ರಮವಹಿಸುತ್ತೇವೆ ಎಂದರು. ಅದಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

Category
ಕರಾವಳಿ ತರಂಗಿಣಿ