ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಸ್ಥಾಪನೆಯೊಂದಿಗೆ ಭಾರತೀಯ ಅಂಚೆಯನ್ನು ದೇಶದ ಅತಿ ದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ರೂಪಾಂತರಗೊಳಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದರು.
ಸಂಸತ್ತಿನಲ್ಲಿ ಏಂಟನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್, ಹಲವು ಯೋಜನೆಗಳನ್ನು ಘೋಷಿಸಿದ್ದು, ಇದರಲ್ಲಿ ದೇಶದ ಅತಿ ದೊಡ್ಡ ಅಂಚೆ ಸೇವೆಯಾಗಿರುವ ಭಾರತೀಯ ಅಂಚೆಯನ್ನು ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಮಾಡಲು 1.5 ಲಕ್ಷ ಗ್ರಾಮಾಂತರ ಅಂಚೆ ಕಚೇರಿ ಸ್ಥಾಪಿಸುವ ಮೂಲಕ ದೊಡ್ಡ ಲಾಜಿಸ್ಟಿಕ್ ಸೇವಾ ಸಂಸ್ಥೆಯಾಗಿ ರೂಪಿಸಲಾಗುವುದು ಎಂದರು.
ಇದೇ ವೇಳೆ ಅಸ್ಸಾಂನಲ್ಲಿ 12.7 ಲಕ್ಷ ಟನ್ ಸಾಮರ್ಥ್ಯದ ಯೂರಿಯಾ ಘಟಕ ಸ್ಥಾಪಿಸುವ ಕುರಿತು ಘೋಷಿಸಿದರು. ಹಣಕಾಸು ಸಚಿವರು ಹೂಡಿಕೆ ಮತ್ತು ವಹಿವಾಟು ಮಿತಿ ಹೆಚ್ಚಿಸುವುದಾಗಿ ಘೋಷಿಸಿದರು. ಗುಣಮಟ್ಟದ ಉತ್ಪನ್ನಗಳೊಂದಿಗೆ ಎಂಎಸ್ಎಂಇ ಶೇ 45ರಷ್ಟು ನಮ್ಮ ರಫ್ತಿನ ಜವಾಬ್ದಾರಿ ಹೊಂದಿರುತ್ತದೆ ಎಂದರು.
ಎಂಎಸ್ಎಂಇಗಳಿಗೆ ಸಾಲದ ಸೌಲಭ್ಯ ಸುಧಾರಣೆಗೆ ಕ್ರೆಡಿಟ್ ಗ್ಯಾರಂಟಿ ಕವರ್ಗೆ ಉತ್ತೇಜಿಸಲಾಗುವುದು ಎಂದರು. ಗ್ರಾಮೀಣ ಆರ್ಥಿಕತೆಗೆ ಸಾಲ ನೀಡುವ ಕಾರ್ಯಾಚರಣೆಗಳಿಗಾಗಿ ಕೇಂದ್ರವು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ ಬೆಂಬಲವನ್ನು ನೀಡುತ್ತದೆ ಎಂದರು.