image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜುಲೈ 3ರಿಂದ ಪವಿತ್ರ ಅಮರನಾಥ್ ಯಾತ್ರೆ ಆರಂಭ

ಜುಲೈ 3ರಿಂದ ಪವಿತ್ರ ಅಮರನಾಥ್ ಯಾತ್ರೆ ಆರಂಭ

ಜಮ್ಮು ಮತ್ತು ಕಾಶ್ಮೀರ : ಜುಲೈ 3ರಿಂದ ಪವಿತ್ರ ಅಮರನಾಥ್ ಯಾತ್ರೆ ಆರಂಭವಾಗಲಿದ್ದು, ಈ ಬಾರಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿನ ಗುಹಾ ದೇವಾಲಯದ ದರ್ಶನವನ್ನು ಯಾತ್ರಾರ್ಥಿಗಳು ಪಡೆಯಲಿದ್ದು, ಮಾರ್ಗ ಮಧ್ಯೆದಲ್ಲಿ ಹೈಟೆಕ್​ ಗ್ಯಾಜೆಟ್​​ ಆಧಾರಿತ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಹಲ್ಗಾಮ್​ ದಾಳಿ ಬಳಿಕ ಈ ಮಾರ್ಗದಲ್ಲಿ ಸಾಗುವ ಯಾತ್ರೆಯಲ್ಲಿ ಮುಖ ಪರಿಚಯ ವ್ಯವಸ್ಥೆ (FRS​) ಅನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ಅಳವಡಿಕೆ ಬಳಿಕ ಈಗಾಗಲೇ ಭಯೋತ್ಪಾದಕ ಸಂಘಟನೆಗೆ ಸೇರಿದ ಇಬ್ಬರನ್ನು ಜೂನ್​ 19ರಂದು ಬಂಧಿಸಲಾಗಿದೆ. ಎಫ್​ಆರ್​ಎಸ್​ ಭಯೋತ್ಪಾದನೆಯಲ್ಲಿ ತೊಡಗಿರುವ ಶಂಕಿತ ಭೂಗತ ಕಾರ್ಯಕರ್ತರು ಮತ್ತು ಬ್ಲ್ಯಾಕ್​ಲಿಸ್ಟ್ ನಲ್ಲಿರುವ​​ ವ್ಯಕ್ತಿಗಳ ಇಮೇಜ್​ಗಳನ್ನು ಒಳಗೊಂಡಿದ್ದು, ಇದು ನೈಜ ಸಮಯದಲ್ಲಿ ಭದ್ರತಾ ಪಡೆಗಳನ್ನು ಎಚ್ಚರಿಸಲಿದೆ.

ಈ ಎಫ್​ಆರ್​ಎಸ್​ನಲ್ಲಿ ಯಾವುದೇ ಬ್ಲ್ಯಾಕ್​ಲಿಸ್ಟ್​​ ವ್ಯಕ್ತಿಗಳು ಬಂದ ತಕ್ಷಣ, ಭದ್ರತಾ ಪಡೆಗಳಿಂದ ನಿರ್ವಹಿಸಲ್ಪಡುವ ಕಣ್ಗಾವಲು ಕೇಂದ್ರದಲ್ಲಿ ಒಂದು ಎಚ್ಚರಿಕೆಯ ಸಂದೇಶ ನೀಡುತ್ತದೆ.​ ಇದರಿಂದಾಗಿ ತಕ್ಷಣಕ್ಕೆ ನೈಜ ಸಮಯದಲ್ಲಿ ಕ್ರಮ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಸಂಪೂರ್ಣ ಯಾತ್ರೆ ಸಾಗುವ ಕಾಶ್ಮೀರ ಕಣಿವೆ ಮಾರ್ಗವನ್ನು ಅಧಿಕಾರಿಗಳು ನೋ ಫ್ಲೈಯಿಂಗ್​ ಝೋನ್​ ಮಾಡಿದ್ದು, ಜುಲೈ 1ರಿಂದ ಆಗಸ್ಟ್​ 10ರ ವರೆಗೆ ಯಾವುದೇ ಡ್ರೋನ್​ ಅಥವಾ ಯುಎವಿಗಳ ಹಾರಾಟ ನಡೆಸದಂತೆ ಸೂಚನೆ ನೀಡಲಾಗಿದೆ. ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ನಡೆಯುವ ವಾರ್ಷಿಕ ಅಮರನಾಥ ಯಾತ್ರೆ ಜುಲೈ 3ರಂದು ಪ್ರಾರಂಭವಾಗಲಿದ್ದು, ರಕ್ಷಾಬಂಧನದ ದಿನ ಅಂದರೆ, ಆಗಸ್ಟ್​ 9ರಂದು ಕೊನೆಯಾಗಲಿದೆ. 58 ದಿನಗಳ ಕಾಲ ನಡೆಯುತ್ತಿದ್ದ ಈ ಯಾತ್ರೆಯನ್ನು ಈ ಬಾರಿ 38ದಿನಗಳಿಗೆ ಸೀಮಿತಗೊಳಿಸಲಾಗಿದೆ.

ಇದರ ಜೊತೆಗೆ ಸಂಪೂರ್ಣ ಯಾತ್ರೆ ಸಾಗುವ ಕಾಶ್ಮೀರ ಕಣಿವೆ ಮಾರ್ಗವನ್ನು ಅಧಿಕಾರಿಗಳು ನೋ ಫ್ಲೈಯಿಂಗ್​ ಝೋನ್​ ಮಾಡಿದ್ದು, ಜುಲೈ 1ರಿಂದ ಆಗಸ್ಟ್​ 10ರ ವರೆಗೆ ಯಾವುದೇ ಡ್ರೋನ್​ ಅಥವಾ ಯುಎವಿಗಳ ಹಾರಾಟ ನಡೆಸದಂತೆ ಸೂಚನೆ ನೀಡಲಾಗಿದೆ. ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ನಡೆಯುವ ವಾರ್ಷಿಕ ಅಮರನಾಥ ಯಾತ್ರೆ ಜುಲೈ 3ರಂದು ಪ್ರಾರಂಭವಾಗಲಿದ್ದು, ರಕ್ಷಾಬಂಧನದ ದಿನ ಅಂದರೆ, ಆಗಸ್ಟ್​ 9ರಂದು ಕೊನೆಯಾಗಲಿದೆ. 58 ದಿನಗಳ ಕಾಲ ನಡೆಯುತ್ತಿದ್ದ ಈ ಯಾತ್ರೆಯನ್ನು ಈ ಬಾರಿ 38ದಿನಗಳಿಗೆ ಸೀಮಿತಗೊಳಿಸಲಾಗಿದೆ.

Category
ಕರಾವಳಿ ತರಂಗಿಣಿ