image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಗ್ರರಿಂದ ಹತ್ಯೆಯಾದ ಅಭಿನಂದನ್​ ವರ್ಧಮಾನ್ ಸೆರೆ ಹಿಡಿದಿದ್ದ ಪಾಕಿಸ್ತಾನದ ಸೇನಾಧಿಕಾರಿ

ಉಗ್ರರಿಂದ ಹತ್ಯೆಯಾದ ಅಭಿನಂದನ್​ ವರ್ಧಮಾನ್ ಸೆರೆ ಹಿಡಿದಿದ್ದ ಪಾಕಿಸ್ತಾನದ ಸೇನಾಧಿಕಾರಿ

ಪಾಕಿಸ್ತಾನ : 2019ರ ಬಾಲಾಕೋಟ್​ ವೈಮಾನಿಕ ದಾಳಿಯ ಸಮಯದಲ್ಲಿ ಭಾರತದ ವಿಂಗ್ ಕಮಾಂಡರ್​​ ಅಭಿನಂದನ್​ ವರ್ಧಮಾನ್​ ಅವರನ್ನು ಸೆರೆಹಿಡಿದಿದ್ದೇನೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನದ ವಿಶೇಷ ಪಡೆಗಳ ಅಧಿಕಾರಿ ತಾಲಿಬಾನ್ ಉಗ್ರರೊಂದಿಗಿನ ಘರ್ಷಣೆಯಲ್ಲಿ ಹತನಾಗಿದ್ದಾರೆ. ಅಫ್ಘಾನ್ ಗಡಿ ಬಳಿಯ ದಕ್ಷಿಣ ವಜೀರಿಸ್ತಾನದ ಸಾರೋಘಾ ಪ್ರದೇಶದಲ್ಲಿ ತಾಲಿಬಾನ್ ಉಗ್ರ ಸಂಘಟನೆಯಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆಗಿನ ಘರ್ಷಣೆಯಲ್ಲಿ ಮೇಜರ್ ಸೈಯದ್ ಮೊಯಿಜ್ ಅಬ್ಬಾಸ್ ಶಾ (37) ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.

ಅಬ್ಬಾಸ್​ ಶಾ ಸಾವಿಗೆ ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ಟಿಟಿಪಿ ಹೊಣೆ ಹೊತ್ತಿದೆ. ಈ ಸಂಘಟನೆಯು ಪಾಕ್​ ಮತ್ತು ಅಫ್ಘಾನ್​ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ಇಸ್ಲಾಮಿಕ್​ ಗುಂಪಾಗಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳ ಮೇಲೆ ಭೀಕರ ದಾಳಿ ಮಾಡಿತ್ತು. ಆಗ ವಿಂಗ್​ ಕಮಾಂಡರ್​ ಆಗಿದ್ದ ಅಭಿನಂದನ್​ ವರ್ಧಮಾನ್​ ಅವರು ಪಾಕ್​ ಸೇನೆಯೊಂದಿಗಿನ ಸೆಣಸಾಟದಲ್ಲಿ ಅದರ ಎಫ್​-16 ಯುದ್ಧ ವಿಮಾನವನ್ನು ಭಾರತದ ಅತ್ಯಂತ ಹಳೆಯ ಮಿಗ್​-21 ಫೈಟರ್​ ಜೆಟ್​ನಿಂದ ಹೊಡೆದುರುಳಿಸಿದ್ದರು.

ಬಳಿಕ, ಭಾರತದ ಕಡೆ ವಾಪಸ್​ ಆಗುತ್ತಿದ್ದಾಗ ಮಿಗ್​ ಯುದ್ಧ ವಿಮಾನ ಡಿಕ್ಕಿ ಹೊಡೆದು ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಪ್ರದೇಶದಲ್ಲಿ ಬಿದ್ದಿತು. ಅದರಲ್ಲಿದ್ದ ಅಭಿನಂದನ್​ ವರ್ಧಮಾನ್​ ಅವರನ್ನು ಪಾಕಿಸ್ತಾನದ ಸೈನಿಕರು ಬಂಧಿಸಿದ್ದರು. ಭಾರತ ಮತ್ತು ಜಾಗತಿಕ ಸಮುದಾಯದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅಭಿನಂದನ್​ ಅವರನ್ನು ಬಿಡುಗಡೆ ಮಾಡಿತು. ಯಾವುದೇ ಅಪಾಯದವಿಲ್ಲವೇ ಅವರು ತಾಯ್ನಾಡಿಗೆ ವಾಪಸಾದರು. ಕೆಲ ದಿನಗಳ ಬಳಿಕ ಮತ್ತೆ ವಾಯುಪಡೆ ಸೇರಿದ ಅವರಿಗೆ 2021ರಲ್ಲಿ ಗ್ರೂಪ್​ ಕ್ಯಾಪ್ಟನ್​ ಆಗಿ ಬಡ್ತಿ ನೀಡಲಾಯಿತು. ಜೊತೆಗೆ ವೀರ ಚಕ್ರವನ್ನೂ ಪ್ರದಾನ ಮಾಡಲಾಯಿತು.

Category
ಕರಾವಳಿ ತರಂಗಿಣಿ