image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೌರಿಕುಂಡ್​​​-ಸೋನ್‌ಪ್ರಯಾಗ್​​​​ ಅರಣ್ಯದಲ್ಲಿ ಹೆಲಿಕಾಪ್ಟರ್ ಪತನ...!

ಗೌರಿಕುಂಡ್​​​-ಸೋನ್‌ಪ್ರಯಾಗ್​​​​ ಅರಣ್ಯದಲ್ಲಿ ಹೆಲಿಕಾಪ್ಟರ್ ಪತನ...!

ಉತ್ತರಾಖಂಡ : ಉತ್ತರಾಖಂಡದ ಕೇದಾರನಾಥ ಸಮೀಪ ಇಂದು ಹೆಲಿಕಾಪ್ಟರ್​​ ಪತನಗೊಂಡಿದ್ದು, ಮಗು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಕೇದಾರನಾಥದಿಂದ ಗುಪ್ತಕಾಶಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ​​ಹೆಲಿಕಾಪ್ಟರ್​​​​ ಗೌರಿಕುಂಡ್​​​-ಸೋನ್‌ಪ್ರಯಾಗ್​​​​ ಅರಣ್ಯದಲ್ಲಿ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜೂನ್​​ 7ರಂದು ಕೇದಾರನಾಥ ಯಾತ್ರೆ ಸಾಗುವ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಬಡಾಸು ಹೆಲಿಪ್ಯಾಡ್‌ನಿಂದ ಈ ಹೆಲಿಕಾಪ್ಟರ್ ಟೇಕ್​ಆಪ್​ ಆಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರನ್ನು ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯ ಬಡಾಸು ಬಳಿ ಹೆಲಿಪ್ಯಾಡ್ ಸಮೀಪದ ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಈ ಹೆಲಿಕಾಪ್ಟರ್ ಕ್ರಿಸ್ಟಲ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿತ್ತು. ಪೈಲಟ್ ಸೇರಿದಂತೆ 6 ಮಂದಿ ಪ್ರಯಾಣಿಸುತ್ತಿದ್ದರು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಪಾರಾಗಿದ್ದರು. ಮೇ ತಿಂಗಳ 8ರಂದು ಉತ್ತರಕಾಶಿಯಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಪೈಲಟ್​ ಸೇರಿ 6 ಯಾತ್ರಿಕರು ಸಾವನ್ನಪ್ಪಿದ್ದರು.

Category
ಕರಾವಳಿ ತರಂಗಿಣಿ