image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದುಬೈನಲ್ಲಿ ಐಐಎಂ - ಅಹಮದಾಬಾದ್, ಐಐಎಫ್‌ಟಿ ಕ್ಯಾಂಪಸ್‌ಗಳ ಘೋಷಣೆ

ದುಬೈನಲ್ಲಿ ಐಐಎಂ - ಅಹಮದಾಬಾದ್, ಐಐಎಫ್‌ಟಿ ಕ್ಯಾಂಪಸ್‌ಗಳ ಘೋಷಣೆ

ನವದೆಹಲಿ: ದುಬೈ ರಾಜಕುಮಾರ, ಉಪ ಪ್ರಧಾನ ಮಂತ್ರಿ ಹಾಗೂ ಯುಎಇ ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ. ಈ ಭೇಟಿಯಲ್ಲಿ ಭಾರತ ಮತ್ತು ದುಬೈ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಕೊಚ್ಚಿ ಮತ್ತು ವಡಿನಾರ್‌ನಲ್ಲಿ ಹಡಗು ದುರಸ್ತಿ ಕ್ಲಸ್ಟರ್‌ಗಳನ್ನು ಸ್ಥಾಪಿಸುವುದು ಮತ್ತು ದುಬೈನಲ್ಲಿ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಕ್ಯಾಂಪಸ್ ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ದುಬೈ ರಾಜಕುಮಾರ ಪ್ರತ್ಯೇಕ ಸಭೆಗಳನ್ನು ನಡೆಸಿದ ಕೆಲವೇ ಗಂಟೆಗಳ ನಂತರ ಈ ನಿರ್ಧಾರಗಳನ್ನು ಘೋಷಿಸಲಾಗಿದೆ.

ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆಯ (ಐಐಎಫ್‌ಟಿ) ಮೊದಲ ವಿದೇಶಿ ಕ್ಯಾಂಪಸ್ ಅನ್ನು ದುಬೈನಲ್ಲಿ ಸ್ಥಾಪಿಸಲಾಗುವುದು ಮತ್ತು ಗಲ್ಫ್ ನಗರದಲ್ಲಿ ಭಾರತ - ಯುಎಇ ಸ್ನೇಹ ಆಸ್ಪತ್ರೆ ನಿರ್ಮಾಣಕ್ಕಾಗಿ ಭೂಮಿಯನ್ನು ಹಂಚಿಕೆ ಮಾಡಲಾಗುವುದು ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ. ಇನ್ನು ಭಾರತ್ ಮಾರ್ಟ್ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಮತ್ತು ಭಾರತ್ ಮಾರ್ಟ್ ಸಂಕೀರ್ಣದ 3-ಡಿ ರೆಂಡರಿಂಗ್ ಪ್ರಾರಂಭಿಸಲು ಒಪ್ಪಿಗೆ ನೀಡಲಾಗಿದೆ ಎಂದೂ ಎಂಇಎ ತಿಳಿಸಿದೆ.

ಮೋದಿ ಅವರೊಂದಿಗಿನ ಸಭೆ ವೇಳೆ, ದುಬೈ ಕ್ರೌನ್ ಪ್ರಿನ್ಸ್ ಪ್ರಧಾನಿಗೆ ತಮ್ಮ ಅಜ್ಜ ಶೇಖ್ ರಶೀದ್ ಅವರ ಬಿಶ್ತ್ (ಅರಬ್ ಪುರುಷರು ಕಾಂಡೂರದ ಮೇಲೆ ಧರಿಸುವ ಸಾಂಪ್ರದಾಯಿಕ ಕಸೂತಿ ನಿಲುವಂಗಿ) ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಇದು ಎರಡೂ ದೇಶಗಳ ನಡುವಿನ ಐತಿಹಾಸಿಕ ಮತ್ತು ಪೀಳಿಗೆಯ ರಾಜಕೀಯ ಸ್ನೇಹವನ್ನು ಸಂಕೇತಿಸುತ್ತದೆ. ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಬಲವಾದ ಸಾಂಸ್ಕೃತಿಕ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಬಗ್ಗೆಯೂ ಇಬ್ಬರೂ ನಾಯಕರು ಚರ್ಚಿಸಿದ್ದಾರೆ. ಇನ್ನು ವಿದೇಶಾಂಗ ಸಚಿವ ಜೈಶಂಕರ್ ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ವಲಯಗಳಲ್ಲಿ ಸಂಬಂಧದ ಅಗಾಧವಾದ ಆಳವಾದ ಮತ್ತು ವಿಸ್ತಾರವನ್ನು ಸಭೆಯಲ್ಲಿ ಎತ್ತಿ ತೋರಿಸಿದರು.

97 ಬಿಲಿಯನ್ ಅಮೆರಿಕನ್ ಡಾಲರ್ ದಾಟುವ ನಿರೀಕ್ಷೆಯಿರುವ ದ್ವಿಪಕ್ಷೀಯ ವ್ಯಾಪಾರವು ಈ ಉಪಕ್ರಮಗಳ ಮೂಲಕ ಮತ್ತಷ್ಟು ಉತ್ತೇಜನವನ್ನು ಪಡೆಯುತ್ತದೆ. ಹಾಗೇ 100 ಬಿಲಿಯನ್ ಅಮೆರಿಕನ್ ಡಾಲರ್ ತೈಲೇತರ ವ್ಯಾಪಾರ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Category
ಕರಾವಳಿ ತರಂಗಿಣಿ