image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮ್ಯಾನ್ಮಾರ್​ನಲ್ಲಿ 7.7 ತೀವ್ರತೆಯ ಭೂಕಂಪ : ತುರ್ತು ಪರಿಸ್ಥಿತಿ ಘೋಷಣೆ

ಮ್ಯಾನ್ಮಾರ್​ನಲ್ಲಿ 7.7 ತೀವ್ರತೆಯ ಭೂಕಂಪ : ತುರ್ತು ಪರಿಸ್ಥಿತಿ ಘೋಷಣೆ

ಮ್ಯಾನ್ಮಾರ್: ಇಂದು ಮಧ್ಯಾಹ್ನ 12.50 ರ ಸುಮಾರಿಗೆ ಮ್ಯಾನ್ಮಾರ್​ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಅದರ ನಂತರ 6.8 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಸಗೈಂಗ್ ನಗರದ ವಾಯುವ್ಯಕ್ಕೆ 16 ಕಿಮೀ ದೂರದಲ್ಲಿ ಮತ್ತು 10 ಕಿಮೀ ಆಳದಲ್ಲಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಮತ್ತು ಅಕ್ಷಾಂಶ 21.93 ಉತ್ತರ ಮತ್ತು ರೇಖಾಂಶ 96.07 ರಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ. ಭೂಕಂಪದಿಂದ ಈವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಪ್ರಸ್ತುತ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ.

ಉತ್ತರ ಥೈಲ್ಯಾಂಡ್​, ಬ್ಯಾಂಗ್​ಕಾಕ್, ಚೀನಾದ ಯುನಾನ್ ಪ್ರಾಂತ್ಯಗಳಲ್ಲಿಯೂ ಕಂಪನದ ಅನುಭವವಾಗಿದೆ. ಯುನಾನ್​ನಲ್ಲಿ ಭೂಕಂಪವು 7.9ರಷ್ಟು ತೀವ್ರತೆಯನ್ನು ಹೊಂದಿತ್ತು ಎಂದು ಚೀನಾ ಹೇಳಿದೆ. ಪರಿಸ್ಥಿತಿಯನ್ನು ಅವಲೋಕಿಸಲು ಥಾಯ್ ಪ್ರಧಾನಿ ಪೆಟೊಂಗ್ ಟಾರ್ನ್ ಶಿನವಾತ್ರಾ ತುರ್ತು ಸಭೆ ನಡೆಸಿ, ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

Category
ಕರಾವಳಿ ತರಂಗಿಣಿ