image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಲ್ಕು ದಿನಗಳಿಂದ ಜಮ್ಮುವಿನ ಕಥುವಾದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ

ನಾಲ್ಕು ದಿನಗಳಿಂದ ಜಮ್ಮುವಿನ ಕಥುವಾದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ

ಜಮ್ಮು ಕಾಶ್ಮೀರ: ಕಳೆದ ನಾಲ್ಕು ದಿನಗಳಿಂದ ಜಮ್ಮು ಕಾಶ್ಮೀರದ ಕಥುವಾದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಸಾಗುತ್ತಿದ್ದು, ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಾನಗರ ಕಾರ್ಯಾಚರಣೆಯಿಂದ 30 ಕಿ.ಮೀ ದೂರದಲ್ಲಿರುವ ರಾಜ್‌ಬಾಗ್‌ನ ಘಾಟಿ ಜುಥಾನಾ ಪ್ರದೇಶದ ಜಖೋಲೆ ಗ್ರಾಮದ ಬಳಿ ಕಾರ್ಯಾಚರಣೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಕುರಿತು ಮಾಹಿತಿ ಸಿಕ್ಕಿದ್ದು ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಎರಡು ಕಡೆಯಿಂದಲೂ ಗುಂಡಿನ ದಾಳಿ ನಡೆದಿದ್ದು, ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಹಿರಾನಗರ ಸೆಕ್ಟರ್​ನಲ್ಲಿ ಒಂದೂವರೆ ಗಂಟೆ ನಡೆದ ಗುಂಡಿನ ದಾಳಿಯಲ್ಲಿನ ಭಯೋತ್ಪಾದಕರ ಗುಂಪೇ ಇಂದಿನ ಗುಂಡಿನ ಚಕಮಕಿಯಲ್ಲೂ ಭಾಗಿಯಾಗಿದೆ. ಇವರು ಗಡಿಯಾಚೆಯಿಂದ ಹೊಸದಾಗಿ ರಚಿಸಲಾದ ಸುರಂಗದ ಮೂಲಕ ನುಸುಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದೋಕ್​ನಲ್ಲಿ ಭಯೋತ್ಪಾದಕರು ಇರುವ ಕುರಿತು ಗುಪ್ತಚರ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪೊಲೀಸರು, ಸೇನೆ, ಎನ್​ಎಸ್​ಜಿ, ಬಿಎಸ್​ಎಫ್​ ಮತ್ತು ಸಿಆರ್​ಪಿಎಫ್ ಈ ಬೃಹತ್​ ಕಾರ್ಯಾಚರಣೆಯಲ್ಲಿ ಶಸ್ತ್ರಸಜ್ಜಿತರಾಗಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ, ತಾಂತ್ರಿಕ ಮತ್ತು ಹೆಲಿಕಾಪ್ಟರ್​, ಡ್ರೋನ್​ ಮತ್ತು ಬುಲೆಟ್​ ಪ್ರೂಫ್​​, ಸ್ನೈಫರ್​ ಶ್ವಾನಗಳು ಭಯೋತ್ಪಾದಕರ ಪತ್ತೆ ಕಾರ್ಯದಲ್ಲಿ ಭಾಗಿಯಾಗಿವೆ.

ಭದ್ರತಾ ಪಡೆ ಬಿಲ್ಲವಾರ್​ ಅರಣ್ಯದಲ್ಲಿ ವಿಶೇಷವಾಗಿ ಶೋಧಕಾರ್ಯ ನಡೆಸುತ್ತಿದ್ದು, ಭಯೋತ್ಪಾದಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹುರಾನಗರದಲ್ಲಿ ನಡೆದ ಶೋಧದಲ್ಲಿ ಎಂ4 ಕಾರ್ಬೈನ್​ ಮ್ಯಾಗಜಿನ್​, ಎರಡು ಗ್ರೆನೇಡ್​​, ಬುಲೆಟ್​ಪ್ರೂಫ್​ ಜಾಕೆಟ್​, ಸ್ಲೀಪಿಂಗ್​ ಬ್ಯಾಗ್​, ಟ್ರಾಕ್​ಸೂಟ್​ ಮತ್ತು ಅನೇಕ ತಿನ್ನುವ ವಸ್ತುಗಳು ಹಾಗೂ ಸುಧಾರಿತ ಸ್ಪೋಟಕ ಸಾಧನ ತಯಾರಿಸಲು ಬೇಕಾದ ಸಾಮಗ್ರಿಗಳಿದ್ದ ಪಾಲಿಥಿನ್​ ಬ್ಯಾಗ್​​ಗಳು ಪತ್ತೆಯಾಗಿದ್ದವು.

ಡಿಜಿಪಿ ನಳಿನ್​ ಪ್ರಭಾತ್​ ನೇತೃತ್ವದಲ್ಲಿ ತಂಡ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ಜಮ್ಮು ವಲಯದ ಐಜಿಪಿ ಭೀಮ್​ ಸೆನ್ ತುತಿ ನೇತೃತ್ವದ ತಂಡವೂ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ.

Category
ಕರಾವಳಿ ತರಂಗಿಣಿ