ತೆಲಂಗಾಣ : ತೆಲಂಗಾಣದ ಎಸ್ಎಲ್ಬಿಸಿ ಟನಲ್ ಕುಸಿದ ಸ್ಥಳದಲ್ಲಿ 24ನೇ ದಿನದ ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ನಾಪತ್ತೆಯಾದ 7 ಮಂದಿ ಕಾರ್ಮಿಕರಿಗೆ ಹುಡುಕಾಟ ತೀವ್ರಗೊಳಿಸಲಾಗಿದೆ.
ಶ್ರೀಶೈಲಂ ಎಡದಂಡೆ ಕಾಲುವೆಯ ಟನಲ್ನ ಒಳ ಪ್ರದೇಶ ಭಾಗಶಃ ಕುಸಿದಿದ್ದು, ಡಿ1 ಮತ್ತು ಡಿ2 ಸ್ಥಳದಲ್ಲಿ ಕಣ್ಮರೆಯಾಗಿರುವ ವ್ಯಕ್ತಿಗಳಿರುವ ಸಾಧ್ಯತೆ ಇದೆ. ಇದಕ್ಕಾಗಿ ಮತ್ತಷ್ಟು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕೇಂದ್ರ ರೈಲ್ವೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ರಾಜ್ಯದ ಗಣಿ ಸಿಂಗರೇಣಿ ಕಾಲೀರಿಸ್, RAT ಮೈನರ್ಸ್ ಹಾಗೂ ಇತರ ಸಿಬ್ಬಂದಿ ಅಗತ್ಯ ಸಾಧನಗಳೊಂದಿಗೆ ಶೋಧದಲ್ಲಿ ಭಾಗಿಯಾಗಿದ್ದಾರೆ. ರಕ್ಷಣಾ ಕಾರ್ಯಕ್ಕೆ ವಿವಿಧ ಕ್ಷೇತ್ರದ ತಜ್ಞರಿಂದ ಮಾಹಿತಿ ಪಡೆದಿದ್ದು, ಸುಧಾರಿತ ತಂತ್ರಜ್ಞಾನದ ಬಳಕೆ ಮಾಡಲಾಗಿದೆ. ಟಿಬಿಎಂ ಆಪರೇಟರ್ ಗುರ್ಪ್ರೀತ್ ಸಿಂಗ್ ಅವರ ಮೃತದೇಹ ಮಾರ್ಚ್ 9ರಂದು ಸಿಕ್ಕಿದ್ದು, ಪಂಜಾಬ್ನಲ್ಲಿರುವ ಕುಟುಂಬಕ್ಕೆ ಒಪ್ಪಿಸಲಾಗಿದೆ. ಇನ್ನೂ 7 ಮಂದಿಗೆ ಹುಡುಕಾಟ ನಡೆಯುತ್ತಿದೆ.