image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

1984 ರ ಸಿಖ್​​ ವಿರೋಧಿ ದಂಗೆಯ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್​ ಮಾಜಿ ಸಂಸದ ಸಜ್ಜನ್​​ಕುಮಾರ್​ಗೆ ಎರಡನೇ ಜೀವಾವಧಿ ಶಿಕ್ಷೆ

1984 ರ ಸಿಖ್​​ ವಿರೋಧಿ ದಂಗೆಯ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್​ ಮಾಜಿ ಸಂಸದ ಸಜ್ಜನ್​​ಕುಮಾರ್​ಗೆ ಎರಡನೇ ಜೀವಾವಧಿ ಶಿಕ್ಷೆ

ನವದೆಹಲಿ : 1984 ರ ಸಿಖ್ ವಿರೋಧಿ ದಂಗೆಯ ವೇಳೆ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಂದೆ-ಮಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ನ ಮಾಜಿ ಸಂಸದ ಸಜ್ಜನ್​​ಕುಮಾರ್​​ಗೆ ದೆಹಲಿ ಕೋರ್ಟ್​ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತು.

ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ತೀರ್ಪು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 21 ರಂದು ನಡೆದಿದ್ದ ವಿಚಾರಣೆಯಲ್ಲಿ ಕಾಂಗ್ರೆಸ್​ನ ಮಾಜಿ ನಾಯಕನನ್ನು ದೋಷಿ ಎಂದು ಘೋಷಿಸಿ, ತೀರ್ಪು ಕಾಯ್ದಿರಿಸಿದ್ದರು. ಇಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಪ್ರಕಟಿಸಿದರು. ದಂಗೆ ಸಂತ್ರಸ್ತರು ಮತ್ತು ತನಿಖೆ ನಡೆಸಿದ ಪೊಲೀಸರು ಸಜ್ಜನ್​​ಕುಮಾರ್​​ಗೆ ಮರಣದಂಡನೆ ನೀಡಬೇಕು. ಇದು ಅಪರೂಪದ ಪ್ರಕರಣ ಎಂದು ಕೋರ್ಟ್​ ಮುಂದೆ ವಾದಿಸಿದ್ದರು. ಆದರೆ, ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಜ್ಜನ್​ಕುಮಾರ್​ ಅವರಿಗೆ ವಿಧಿಸಲಾಗುತ್ತಿರುವ ಎರಡನೇ ಜೀವಾವಧಿ ಶಿಕ್ಷೆ ಇದಾಗಿದೆ. 1984 ರ ಸಿಖ್​​ ವಿರೋಧಿ ದಂಗೆಗೆ ಸಂಬಂಧಿಸಿದಂತೆ ದೆಹಲಿಯ ಕಂಟೋನ್ಮೆಂಟ್ ನಡೆದ ​ದಂಗೆಯಲ್ಲಿ ಭಾಗಿಯಾದ ಪ್ರಕರಣದಲ್ಲಿ ಅವರಿಗೆ 2018 ರಲ್ಲಿ ದೆಹಲಿಯ ವಿಶೇಷ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಸಜ್ಜನ್​ಕುಮಾರ್​​ ತಿಹಾರ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ.

1984ರ ಅಕ್ಟೋಬರ್​ 31ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸಿಖ್​​ ಗನ್​​ಮ್ಯಾನ್​​ಗಳು ಕೊಂದ ಬಳಿಕ, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಂದಿನ ಪ್ರಭಾವಿ ಕಾಂಗ್ರೆಸ್​​ ನಾಯಕರಾಗಿದ್ದ ಸಜ್ಜನ್​ಕುಮಾರ್​ ಅವರು ಶಸ್ತ್ರಾಸ್ತ್ರ ಪಡೆಯನ್ನು ರೂಪಿಸಿದ್ದರು. ಜೊತೆಗೆ ಅದರ ನೇತೃತ್ವವನ್ನೂ ವಹಿಸಿದ್ದರು.

ಇಂದಿರಾ ಹತ್ಯೆಯಾದ ಮರುದಿನ ಅಂದರೆ, ನವೆಂಬರ್ 1ರಂದು ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಮ್ಮ ಶಸ್ತ್ರಸಜ್ಜಿತ ಗುಂಪನ್ನು ನುಗ್ಗಿಸಿ ದಂಗೆ ಎಬ್ಬಿಸಿದ್ದ ಆರೋಪ ಇವರ ಮೇಲಿದೆ. ಗಲಭೆಯಲ್ಲಿ ಸಿಖ್​ ಸಮುದಾಯದ ಜಸ್ವಂತ್​ ಸಿಂಗ್​ ಮತ್ತು ಅವರ ಮಗ ತರುಣ್​​ದೀಪ್​ ಸಿಂಗ್​​ ಅವರ ಕೊಲೆಯಾಗಿತ್ತು. ಬಳಿಕ ಸಜ್ಜನ್​​ಕುಮಾರ್​​ ನೇತೃತ್ವದ ಗುಂಪಿನ ವಿರುದ್ಧ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Category
ಕರಾವಳಿ ತರಂಗಿಣಿ