image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜಸ್ಥಾನ ಕಾಂಗ್ರೆಸ್​ ಶಾಸಕರಿಂದ ಅಹೋರಾತ್ರಿ ಧರಣಿ

ರಾಜಸ್ಥಾನ ಕಾಂಗ್ರೆಸ್​ ಶಾಸಕರಿಂದ ಅಹೋರಾತ್ರಿ ಧರಣಿ

ರಾಜಸ್ಥಾನ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ಹೇಳಿಕೆಯು ರಾಜಸ್ಥಾನದ ವಿಧಾನಸಭೆಯಲ್ಲಿ ಜಟಾಪಟಿಗೆ ಕಾರಣವಾಗಿದ್ದು, ಕಾಂಗ್ರೆಸ್​ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಶುಕ್ರವಾರದ ಅಧಿವೇಶನದಲ್ಲಿ ಸಚಿವರ ಹೇಳಿಕೆ ಖಂಡಿಸಿ ಸದನದಲ್ಲಿ ಕೋಲಾಹಲ ನಿರ್ಮಾಣವಾಯಿತು. ಈ ವೇಳೆ ಆರು ಶಾಸಕರನ್ನು ಸದನದಿಂದ ಅಮಾನತು ಮಾಡಿತು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್​ ಅಹೋರಾತ್ರಿ ಧರಣಿ ಮಾಡಲು ನಿರ್ಧರಿಸಿತು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್​ ಗೆಹ್ಲೋಟ್​, ಬಜೆಟ್​ ಅಧಿವೇಶನದಲ್ಲಿ ಇಂದಿರಾ ಗಾಂಧಿಯನ್ನು ಅಜ್ಜಿ ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ಈ ಕೋಲಾಹಲ ಆರಂಭವಾಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಗೆಹ್ಲೋಟ್​ 2023 - 24ರ ಬಜೆಟ್​​ನತ್ತ ಕೂಡ ಬೊಟ್ಟು ಮಾಡಿದ್ದು, ನಿಮ್ಮ ಅಜ್ಜಿ ಇಂದಿರಾ ಗಾಂಧಿ ಹೆಸರನ್ನೇ ಎಲ್ಲಾ ಯೋಜನೆಗಳಿಗೆ ಇಡುತ್ತೀರಾ ಎಂದು ಪ್ರಶ್ನಿಸಿದ್ದರು . ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್​ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿಯೇ ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು.

ಗದ್ದಲ ನಿಲ್ಲದೇ ಇರುವುದರಿಂದ ಹಾಗೂ ಸದನದ ಕಲಾಪ ಅಸ್ತವ್ಯಸ್ಥಗೊಳಿಸಿದ್ದಾರೆ ಎಂದು ಸ್ವೀಕರ್ ಕಾಂಗ್ರೆಸ್​​​​ ನ ಆರು ಜನ ಶಾಸಕರನ್ನು ಅಮಾನತಿನಲ್ಲಿಟ್ಟಿರುವುದಾಗಿ ಘೋಷಿಸಿದರು. ಹೀಗಾಗಿ ವಿಪಕ್ಷ ಕಾಂಗ್ರೆಸ್​ ಅಹೋರಾತ್ರಿ ಧರಣಿ ನಡೆಸುವ ನಿರ್ಧಾರ ಕೈಗೊಂಡಿತು. ಸರ್ಕಾರದ ಮುಖ್ಯ ವಿಪ್​ ಜೋಗೇಶ್ವರ್​ ಗಾರ್ಗ್​​ ಕಾಂಗ್ರೆಸ್​ ಶಾಸಕರಾದ ಗೋವಿಂದ್​ ಸಿಂಗ್​, ದೊತಸರ, ರಾಮ್ಕೇಶ್​ ಮೀನಾ, ಅಮಿನ್​ ಕಾಜ್ಜಿ, ಜಾಕಿರ್​ ಹುಸೇನ್​, ಹಕಂ ಅಲಿ ಮತ್ತು ಸಂಜಯ್​ ಕುಮಾರ್​ ಅವರನ್ನು ಧ್ವನಿ ಮತದ ಮೂಲಕ, ಅಶಿಸ್ತಿನ ಕಾರಣ ನೀಡಿ ಅಮಾನತು ಮಾಡಲಾಗಿದೆ.

Category
ಕರಾವಳಿ ತರಂಗಿಣಿ