image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆನ್​ಲೈನ್​ ಮೂಲಕ ಶೇಖ್​ ಹಸೀನಾ ಭಾಷಣ : ಹಿಂಸಾಚಾರ

ಆನ್​ಲೈನ್​ ಮೂಲಕ ಶೇಖ್​ ಹಸೀನಾ ಭಾಷಣ : ಹಿಂಸಾಚಾರ

ನವದೆಹಲಿ: ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಜನರ ಆಕ್ರೋಶಕ್ಕೆ ದೇಶದ ಸಂಸ್ಥಾಪಕರಾದ ಶೇಖ್​ ಮುಜಿಬುರ್​ ರೆಹಮಾನ್​ ಅವರ ಮನೆ ಹೊತ್ತಿ ಉರಿದಿದೆ. ಇದಕ್ಕೆ ಕಾರಣ ದೇಶ ತೊರೆದು ಪಲಾಯನ ಮಾಡಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್​ ಹಸೀನಾ ಮಾಡಿರುವ ಭಾಷಣವಾಗಿದೆ.

ಆನ್​ಲೈನ್​ ಮೂಲಕ ದೇಶವನ್ನು ಉದ್ದೇಶಿಸಿ ಶೇಖ್​ ಹಸೀನಾ ಮಾತನಾಡುತ್ತಿದ್ದಂತೆ ಉದ್ರಿಕ್ತರಾದ ಪ್ರತಿಭಟನಾಕಾರರ ಗುಂಪು ಅವಾಮಿ ಲೀಗ್ ನಿಷೇಧಿಸುವಂತೆ ಒತ್ತಾಯಿಸಿ ಢಾಕಾದಲ್ಲಿ ಅವರ ತಂದೆ ಶೇಖ್​ ಮುಜಿಬುರ್​ ರೆಹಮಾನ್ ಸ್ಮಾರಣಾರ್ಥವಾಗಿ ಇರುವ ನಿವಾಸದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ.

ಆಕ್ರೋಶಿತ ದಾಳಿಕೋರರ ಗುಂಪು ಧನ್ಮಂಡಿಯ 32ರಲ್ಲಿರುವ ರೆಹಮಾನ್​ ಸ್ಮಾರಕ ನಿವಾಸದ ಗೇಟ್​ ಮುರಿದು ಒಳ ಬಂದು ದಾಳಿಯನ್ನು ಆರಂಭಿಸಿದರು. ಕಟ್ಟಡದ ಮೇಲೆ ಹತ್ತಿ, ನಿವಾಸವನ್ನು ಧ್ವಂಸ ಮಾಡಿದ ಅವರು, ಮೇಲಿನ ಮಹಡಿಗೆ ಬೆಂಕಿ ಇಟ್ಟಿದ್ದಾರೆ.

ಅವಾಮಿ ಲೀಗ್‌ನಿಂದ ವಿಸರ್ಜಿಸಲ್ಪಟ್ಟ ವಿದ್ಯಾರ್ಥಿ ವಿಭಾಗ ಛತ್ರ ಲೀಗ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಸೀನಾ ಅವರು ಭಾಷಣ ಮಾಡಿದ್ದರು. ಈ ವೇಳೆ ದೇಶದಲ್ಲಿರುವ ಪ್ರಸ್ತುತ ಆಡಳಿತದ ವಿರುದ್ಧ ಪ್ರತಿರೋಧಿಸಲು ಅವರು ದೇಶವಾಸಿಗಳಿಗೆ ಕರೆ ನೀಡಿದ್ದರು.

ಭಾಷಣದಲ್ಲಿ 'ಮುಹಮ್ಮದ್ ಯೂನಸ್ ಅವರ ಆಡಳಿತವೂ ವಿದ್ಯಾರ್ಥಿಗಳ ತಾರತಮ್ಯ ವಿರೋಧಿ ಚಳವಳಿಯಿಂದ ಸ್ಥಾಪನೆ ಮಾಡಲಾಗಿದೆ. ಅವರು ದೇಶದ ಧ್ವಜ, ಸಂವಿಧಾನ, ಲಕ್ಷಾಂತರ ಹುತಾತ್ಮರ ಜೀವನವನ್ನು ಬುಲ್ಡೋಜರ್​ನಿಂದ ನಾಶ ಮಾಡುವ ಶಕ್ತಿ ಹೊಂದಿಲ್ಲ. ಅವರು ಕಟ್ಟಡಗಳನ್ನು ಧ್ವಂಸ ಮಾಡಬಹುದು. ಇತಿಹಾಸವನ್ನಲ್ಲ. ಆದರೆ, ಇತಿಹಾಸ ಇದರ ಪ್ರತೀಕಾರ ಪಡೆಯಲಿದೆ ಎಂಬುದು ನೆನಪಿರಲಿ' ಎಂದು ಹೇಳಿದ್ದರು.

Category
ಕರಾವಳಿ ತರಂಗಿಣಿ