image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಾಳಿಪಟ ಮಾಂಜಾದಿಂದ ಕತ್ತು ಸೀಳಿ ಬಾಲಕ ಸೇರಿ, ನಾಲ್ವರ ಮೃತ್ಯು

ಗಾಳಿಪಟ ಮಾಂಜಾದಿಂದ ಕತ್ತು ಸೀಳಿ ಬಾಲಕ ಸೇರಿ, ನಾಲ್ವರ ಮೃತ್ಯು

ಅಹ್ಮದಾಬಾದ್: ಗುಜರಾತ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಗಾಳಿಪಟ ಹಾರಾಟದ ಸಂದರ್ಭ ಮಾಂಜಾ (ಗಾಳಿಪಟದ ದಾರ)ದಿಂದ ಕೊರಳು ಸೀಳಲ್ಪಟ್ಟು ನಾಲ್ಕು ವರ್ಷದ ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ರಾಜಕೋಟ್, ಪಂಚಮಹಲ್, ಮೆಕ್ಸಾನ ಹಾಗೂ ಸುರೇಂದ್ರ ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು,ರಾಜ್ಯಾದ್ಯಂತ ಗಾಳಿಪಟ ಹಾರಾಟದ ಸಂದರ್ಭ ಹಲವಾರು ಮಂದಿ ಗಾಯಗೊಂಡ ಘಟನೆಗಳು ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಕ್ರಾಂತಿ ಪ್ರಯುಕ್ತ ಗುಜರಾತ್‌ನಲ್ಲಿ ಗಾಳಿಪಟ ಹಾರಾಟ ನಡೆಸುವ ಸಂಪ್ರದಾಯ ಜನಪ್ರಿಯವಾಗಿದ್ದು,

ಪಂಚಮಹಲ್ ಜಿಲ್ಲೆಯ ಹಲೊಲ್ ಪಟ್ಟಣದಲ್ಲಿ ನಾಲ್ಕು ವರ್ಷದ ಕುನಾಲ್ ಪರಮಾರ್ ಎಂಬ ಬಾಲಕನ ಕೊರಳನ್ನು ಗಾಳಿಪಟದ ದಾರ ಸೀಳಿ ಹಾಕಿದೆ. ಕುನಾಲ್ ಪರಮಾರ್ ಮಾರುಕಟ್ಟೆಯಲ್ಲಿ ಗಾಳಿಪಟ ಹಾಗೂ ಬಲೂನುಗಳನ್ನು ಖರೀದಿಸಲು ತನ್ನ ತಂದೆಯೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಗಾಳಿಪಟದ ದಾರದ ತುಂಡು ಆತನ ಕತ್ತನ್ನು ಸುತ್ತುವರಿದ್ದು, ಹರಿತವಾದ ಗಾಯವನ್ನುಂಟು ಮಾಡಿತ್ತು. ತೀವ್ರ ರಕ್ತಸ್ರಾವಗೊಂಡ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಳಿಪಟ ಹಾರಾಟಕ್ಕೆ ಸಂಬಂಧಿಸಿ ಅವಘಡಗಳ ಹಿನ್ನೆಲೆಯಲ್ಲಿ ರಾಜ್ಯದ ಆಂಬುಲೆನ್ ಸೇವೆ 308ಕ್ಕೆ 3707ಕ್ಕೂ ಅಧಿಕ ತುರ್ತು ಕರೆಗಳು ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ನೈಲಾನ್‌ನ ಅಥವಾ ಗಾಜಿನ ಚೂರುಗಳಿಂದ ಲೇಪಿತತವಾದ ಗಾಳಿಪಟ ದಾರವು ಅತ್ಯಂತ ಅಪಾಯಕಾರಿಯಾಗಿದ್ದು, ಅದನ್ನು ನಿಷೇಧಿಸಲಾಗಿದ್ದರೂ, ಎದುರಾಳಿಗಳ ಗಾಳಿಪಟವನ್ನು ಕತ್ತರಿಸುವ ಉದ್ದೇಶದಿಂದ ಅನೇಕ ಗಾಳಿಪಟ ಹಾರಿಸುವವರು ಈಗಲೂ ಅದನ್ನು ಬಳಸಿಕೊಳ್ಳುತ್ತಿದ್ದರುವುದು ವರದಿಯಾಗುತ್ತಲೇ ಇದೆ.

Category
ಕರಾವಳಿ ತರಂಗಿಣಿ