image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಜ್ಮೀರ್‌ ಉರುಸ್​​​ಗಾಗಿ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಾಲಿಡಲಿರುವ ಪಾಕ್​ ಯಾತ್ರಿಕರ ತಂಡ : ಗುಪ್ತಚ್ಚರ ಇಲಾಖೆ ಅಲರ್ಟ್

ಅಜ್ಮೀರ್‌ ಉರುಸ್​​​ಗಾಗಿ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಾಲಿಡಲಿರುವ ಪಾಕ್​ ಯಾತ್ರಿಕರ ತಂಡ : ಗುಪ್ತಚ್ಚರ ಇಲಾಖೆ ಅಲರ್ಟ್

ರಾಜಸ್ಥಾನ: ಪ್ರತಿ ವರ್ಷದಂತೆ ಈ ವರ್ಷವೂ ಅಜ್ಮೀರ್​ನ ಖ್ಯಾತ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾದಲ್ಲಿ ವಾರ್ಷಿಕ ಉರ್ಸ್ (ಉರುಸು-ಜಾತ್ರೆ) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಯಾತ್ರಿಕರ ತಂಡವೊಂದು ಇಲ್ಲಿಗೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಲಿದೆ.

1974ರ ಭಾರತ-ಪಾಕಿಸ್ತಾನ ಶಿಷ್ಟಾಚಾರದ ಚೌಕಟ್ಟಿನಡಿ ಅಜ್ಮೀರ್ ದರ್ಗಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶವಿದ್ದು, ಅದರಂತೆ ಇಲ್ಲಿಗೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಲಿದೆ ಎಂದು ಅಜ್ಮೀರ್ ಆಡಳಿತ ಮಂಡಳಿ ತಿಳಿಸಿದೆ.

ಉರುಸ್ ನಲ್ಲಿ ಪಾಲ್ಗೊಳ್ಳಲು ಸಲುವಾಗಿ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ. ಈ ಪೈಕಿ ನೆರೆಯ ರಾಷ್ಟ್ರ ಪಾಕಿಸ್ತಾನದ ಯಾತ್ರಾರ್ಥಿಗಳ ತಂಡ ಕೂಡ ಜನವರಿ 4 ರಂದು ಭಾರತವನ್ನು ಪ್ರವೇಶ ಮಾಡಲಿದೆ. 264 ಪಾಕಿಸ್ತಾನಿ ಯಾತ್ರಾರ್ಥಿಗಳ ಗುಂಪು ಜನವರಿ 4 ರಂದು ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಾಲಿಡಲಿದೆ. ಮರುದಿನ ಜನವರಿ 5 ರಂದು ದೆಹಲಿಗೆ ಬರಲಿದ್ದು, ಅಲ್ಲಿಂದ ವಿಶೇಷ ರೈಲಿನ ಮೂಲಕ ಜನವರಿ 6 ರಂದು ಅಜ್ಮೀರ್ ತಲುಪಲಿದೆ. ಜನವರಿ 12 ರಂದು ಅಜ್ಮೀರ್‌ನಿಂದ ವಾಪಸ್​ ತೆರಳಲಿದೆ. ಕೇಂದ್ರೀಯ ಬಾಲಕಿಯರ ಶಾಲೆಯಲ್ಲಿ ಪಾಪ್​ ಯಾತ್ರಿಕರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿದೆ. ಇದು ತಾತ್ಕಾಲಿಕ ವೇಳಾ ಪಟ್ಟಿಯಾಗಿದ್ದು, ಅಧಿಕೃತ ಭೇಟಿ ಬಗ್ಗೆ ಇನ್ನೂ ಪ್ರಕಟವಾಗಬೇಕಿದೆ ಎಂದು ಅಜ್ಮೀರ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.

Category
ಕರಾವಳಿ ತರಂಗಿಣಿ