ಮಧ್ಯಪ್ರದೇಶ: ಭಾರತದ ಏಳಿಗೆಗೆ ಹಣಕಾಸಿನ ತೊಂದರೆ ಇಲ್ಲ, ಆದರೆ ಹಳ್ಳಿಗಳಲ್ಲಿರುವ ಬಡವರು, ರೈತರನ್ನು ಪ್ರತಿನಿಧಿಸುವ ಬದ್ಧ ನಾಯಕತ್ವದ ಕೊರತೆಯಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟಿದ್ದಾರೆ. ಮಧ್ಯಪ್ರದೇಶದ ವಿದಿಶಾದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಭಾರತದಲ್ಲಿರುವ ಸಂಪನ್ಮೂಲಗಳು ಮಹಾಭಾರತದಲ್ಲಿನ ಅಕ್ಷಯ ಪಾತ್ರಯಂತೆ, ತೆಗೆದಷ್ಟು ಇನ್ನು ಹೆಚ್ಚು ಹುಟ್ಟುತ್ತಲೇ ಇರುತ್ತದೆ. ನಮ್ಮ ದೇಶದಲ್ಲಿ ಹಣದ ಯಾವುದೇ ಕೊರತೆಯಿಲ್ಲ, ಆದರೆ ಹಳ್ಳಿಗಳಲ್ಲಿರುವ ಬಡವರು, ರೈತರ ಪರವಾಗಿ ಪ್ರಾಮಾಣಿಕವಾಗಿ ಕಲಸ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.ಘೋಷಣೆಯಾದ ಯೋಜನೆಗಳನ್ನು ಪೂರ್ಣಗೊಳಿಸಲು ಸಮರ್ಪಿತ ಕಾರ್ಮಿಕರ ಕೊರತೆಯಿಂದಾಗಿ ಎಷ್ಟೋ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳುತ್ತಿವೆ ಎಂದು ಅವರು ಪುನರುಚ್ಚರಿಸಿದರು.