image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

‘ದಿಮಾಗಿ ನಕ್ಸಲರು’ ಯಾರು?: ಕಿರಣ್ ರಿಜಿಜು ಸ್ಪಷ್ಟನೆ

‘ದಿಮಾಗಿ ನಕ್ಸಲರು’ ಯಾರು?: ಕಿರಣ್ ರಿಜಿಜು ಸ್ಪಷ್ಟನೆ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಳಸಿದ 'ದಿಮಾಗಿ ನಕ್ಸಲರು' ಎಂಬ ಪದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಪದದ ಕುರಿತು ವಿವರಣೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ಎಲ್ಲ ನಾಯಕರನ್ನು 'ದಿಮಾಗಿ ನಕ್ಸಲರು' ಎಂದು ಕರೆದಿಲ್ಲ; ಆದರೆ ಅವರಲ್ಲಿ ಕೆಲವರು ಅಂತಹ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ರಿಜಿಜು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ Xನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಕಿರಣ್ ರಿಜಿಜು, 'ದಿಮಾಗಿ ನಕ್ಸಲರು' ಎಂದರೆ ಯಾರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮಾವೋವಾದಿಗಳನ್ನು ಬೆಂಬಲಿಸುವವರು, ಭಾರತೀಯ ಸಂವಿಧಾನವನ್ನು ತಿರಸ್ಕರಿಸುವವರು, ಪ್ರತ್ಯೇಕತಾವಾದಿಗಳ ಜೊತೆ ನಿಂತು 370ನೇ ವಿಧಿಯನ್ನು ಬೆಂಬಲಿಸುವವರು ಹಾಗೂ ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗದಿಂದ ಪ್ರತ್ಯೇಕಿಸಲು ಬಯಸುವವರನ್ನು ಈ ಸಾಲಿಗೆ ಸೇರಿಸಿದ್ದಾರೆ. ಜೊತೆಗೆ ಈಶಾನ್ಯ ರಾಜ್ಯಗಳನ್ನು ದೇಶದೊಂದಿಗೆ ಸಂಪರ್ಕಿಸುವ ಪಶ್ಚಿಮ ಬಂಗಾಳದಲ್ಲಿರುವ ಸುಮಾರು 22 ಕಿ.ಮೀ. ಅಗಲದ 'ಚಿಕನ್ ನೆಕ್' ಭೂ ಕಾರಿಡಾರ್ ಅನ್ನು ಕತ್ತರಿಸಬೇಕು ಎಂದು ಕರೆ ನೀಡುವವರೂ ಸಹ 'ದಿಮಾಗಿ ನಕ್ಸಲರು' ಎಂದು ರಿಜಿಜು ವಿವರಿಸಿದ್ದಾರೆ.

Category
ಕರಾವಳಿ ತರಂಗಿಣಿ