image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯ ನಡುವೆ 4.4 ತೀವ್ರತೆಯ ಭೂಕಂಪ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯ ನಡುವೆ 4.4 ತೀವ್ರತೆಯ ಭೂಕಂಪ

ನವದೆಹಲಿ: ಒಂದು ಕಡೆ ಭಾರಿ ಮಳೆ ಸುರಿಯುತ್ತಿದ್ದರೆ, ಮತ್ತೊಂದು ಕಡೆ ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ 4.4 ತೀವ್ರತೆಯ ಭೂಕಂಪದ ಅನುಭವವಾಗಿದೆ. ಇದು ದೆಹಲಿಗರನ್ನು ಆತಂಕಕ್ಕೆ ದೂಡಿದೆ. ಹರಿಯಾಣದ ಜಜ್ಜರ್‌ನಲ್ಲಿ ಇಂದು ಬೆಳಗ್ಗೆ 9:04 ಕ್ಕೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ - ಎನ್‌ಸಿಆರ್‌ನಲ್ಲಿ ಬಲವಾದ ಕಂಪನ ಆಗಿದೆ ಎಂದು ತಿಳಿದು ಬಂದಿದೆ. ಜಜ್ಜರ್ ನಿಂದ ಈಶಾನ್ಯಕ್ಕೆ 3 ಕಿ.ಮೀ ಮತ್ತು ದೆಹಲಿಯಿಂದ ಪಶ್ಚಿಮಕ್ಕೆ 51 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. ಬೆಳಗ್ಗೆ 9.04 ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಭೂಮಿ ನಡುಗಿದ್ದು, ನಮ್ಮ ಅನುಭವಕ್ಕೆ ಬಂತು.. ನಿಜಕ್ಕೂ ಭಯಾನಕವಾಗಿತ್ತು, ನನ್ನ ವಾಹನವು ಇದ್ದಕ್ಕಿದ್ದಂತೆ ನಡುಗಿತು ಎಂದು ದೆಹಲಿಯ ವ್ಯಕ್ತಿಯೊಬ್ಬರು ತಮಗಾದ ಅನುಭವ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನೊಬ್ಬ ದೆಹಲಿ ನಾಗರಿಕ ಈ ಬಗ್ಗೆ ಮಾತನಾಡಿದ್ದು, ಭೂಮಿ ನಡುಗಿತು, ಇದರಿಂದ ನಮಗೆ ಸ್ವಲ್ಪ ಭಯವಾಯ್ತು ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Category
ಕರಾವಳಿ ತರಂಗಿಣಿ