ಮಂಗಳೂರು: ಅನನ್ಯ ಭಟ್ ಎಂಬ ಹೆಸರಿನ ವೈದ್ಯಕೀಯ ವಿಧ್ಯಾರ್ಥಿನಿಯು 2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿರುವ ಬಗ್ಗೆ ಯುವತಿಯ ತಾಯಿಯು ದಿನಾಂಕ 15.07.2025 ರಂದು ಧರ್ಮಸ್ಥಳ ಠಾಣೆಯಲ್ಲಿ ನೀಡಿದ್ದ ದೂರು ಅರ್ಜಿಯನ್ನು No:175/PTN/DPS/2025 ರಂತೆ ಸ್ವಿಕರಿಸಲಾಗಿದ್ದು, ಸದ್ರಿ ದೂರು ಅರ್ಜಿಯನ್ನು ಮಾನ್ಯ ಡಿ.ಜಿ & ಐ.ಜಿ.ಪಿ ರವರು ದಿನಾಂಕ:19.08.2025 ರಂದು ನೀಡಿದ ಆದೇಶದ ಮೇರೆಗೆ ಮುಂದಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡ ( SIT )ಕ್ಕೆ ಹಸ್ತಾಂತರಿಸಲಾಗಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.