image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಂಡ ಹೆಂಡಿರ ಜಗಳ: ನದಿಗೆ ಹಾರಿ ಇಂಜಿನಿಯರ್ ಪತಿ ಆತ್ಮಹತ್ಯೆ.!

ಗಂಡ ಹೆಂಡಿರ ಜಗಳ: ನದಿಗೆ ಹಾರಿ ಇಂಜಿನಿಯರ್ ಪತಿ ಆತ್ಮಹತ್ಯೆ.!

ಹಾಸನ : ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ನದಿಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲೂಕಿನ ಗೊರೂರು ಶೆಟ್ಟಿಹಳ್ಳಿಯಲ್ಲಿ  ನಡೆದಿದೆ. ಇಂದಿರಾನಗರದ ನಿವಾಸಿ ಜೆಜೆ ಪ್ರಮೋದ್ ಎಂಬುವವರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಕಿರುಕುಳಕ್ಕೆ ಬೇಸತ್ತು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಮೋದ್ ಹಾಗೂ ಅವರ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿಯ ತಮ್ಮಂದಿರು ಕೂಡ ಪ್ರಮೋದ್ ಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.  ಡಿ.29 ರಿಂದ ಪ್ರಮೋದ್ ನಾಪತೆಯಾಗಿದ್ದು,   ನಂತರ ಹಾಸನದ ಕೆಆರ್ ಪುರಂ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.  ಹುಡುಕಾಟ ನಡೆಸಿದಾಗ ಹೇಮಾವತಿ ಸೇತುವೆ ಬಳಿ ಪ್ರಮೋದ್ ಬೈಕ್‌ ಪತ್ತೆಯಾಗಿತ್ತು. ನಂತರ ಅಗ್ನಿಶಾಮಕ ದಳ ಹಾಗೂ ಪೊಲೀಸರು ಪರಿಶೀಲನೆ ನಡೆಸಿದಾಗ ನದಿಯಲ್ಲಿ ಪ್ರಮೋದ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Category
ಕರಾವಳಿ ತರಂಗಿಣಿ