ಮುಂಬೈ : ಕಂಡಿದೆ. ನಿನ್ನೆ ರಾಜಸ್ಥಾನ ರಾಯಲ್ ವಿರುದ್ಧದ ಪಂದ್ಯದಲ್ಲಿ 6 ರನ್ಗಳಿಂದ ಪರಾಭವಗೊಂಡಿದೆ. ಇದು ಚೆನ್ನೈ ತಂಡದ ಸತತ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ತವರಿನಲ್ಲಿ ನಡೆದಿದ್ದ ಪಂದ್ಯದಲ್ಲೂ ಸೋಲು ಅನುಭವಿಸಿತ್ತು.
ಗುಹವಾಟಿಯ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರಾಜಸ್ಥಾನ ನೀಡಿದ್ದ 183 ರನ್ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್ನಲ್ಲಿ ರಚಿನ್ ರವೀಂದ್ರ ಕ್ಲೀನ್ ಬೋಲ್ಡ್ ಆದ ಕಾರಣ ಚೆನ್ನೈ ತಂಡಕ್ಕೆ ಚೇಸಿಂಗ್ ಕಷ್ಟಕರವಾಯಿತು. ರಾಹುಲ್ ತ್ರಿಪಾಠಿ (23), ಶಿವಂ ದುಬೆ (18) ಉತ್ತಮ ಆಟವಾಡಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ವಿಜಯ್ ಶಂಕರ್ (9) ಕೂಡ ಹೀಗೆ ಬಂದು ಹಾಗೆ ತೆರಳಿದರು.
ಒಂದೆಡೆ ಸಿಎಸ್ಕೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ರುತುರಾಜ್ ನಾಯಕನ ಇನ್ನಿಂಗ್ಸ್ ಆಡಿದರು. 44 ಎಸೆತಗಳಲ್ಲಿ 7 ಬೌಂಡರಿ ಮತ್ತು ಸಿಕ್ಸರ್ ಸಹಾಯದಿಂದ ರುತುರಾಜ್ 63ರನ್ ಬಾರಿಸಿದರು ಇದರೊಂದಿಗೆ ಅರ್ಧಶತಕ ಪೂರ್ಣಗೊಳಿಸಿದರು.
ಕೊನೆಯ 5 ಓವರ್ಗಳಲ್ಲಿ 61 ರನ್ಗಳು ಬೇಕಾಗಿದ್ದಾಗ, ಹಸರಂಗ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಿದ ರುತುರಾಜ್ ಮುಂದಿನ ಎಸೆತದಲ್ಲೇ ಔಟಾದರು ಇದರೊಂದಿಗೆ ತಂಡದ ಮೇಲೆ ಒತ್ತಡ ಹೆಚ್ಚಿತು. ನಂತರ, ಕ್ರೀಸ್ನಲ್ಲಿದ್ದ ಧೋನಿ ಮತ್ತು ಜಡೇಜಾ ಕೊನೆ ವರೆಗೂ ಹೋರಾಡಿದರು ತಂಡಕ್ಕೆ ಗೆಲುವ ಧಕ್ಕಲಿಲ್ಲ. ಸಂದೀಪ್ ಶರ್ಮಾ ಎಸೆತದಲ್ಲಿ ಧೋನಿ ಔಟ್ ಆಗಿ ಪೆವಿಲಿಯನ್ಗೆ ಸೇರುತ್ತಿದ್ದಂತೆ ಚೆನ್ನೈ ತಂಡದ ಗೆಲುವಿನ ಭರವಸೆ ಹುಸಿಗೊಳಿಸಲಾಯಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಉತ್ತಮ ಸ್ಕೋರ್ ಕಲೆಹಾಕಿತು. ನಿತೀಶ್ ರಾಣಾ (81) ಅವರ ಅದ್ಭುತ ಇನ್ನಿಂಗ್ಸ್ನೊಂದಿಗೆ ತಂಡವು 200+ ಸ್ಕೋರ್ ಗಳಿಸುವ ನಿರೀಕ್ಷೆಯಿತ್ತು, ಆದರೆ, ದ್ವಿತೀಯಾರ್ಧದಲ್ಲಿ ಎಡವಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (4) ಕೇವಲ ಸಿಂಗಲ್ ಡಿಜಿಟ್ಗೆ ಹಿನ್ನಡೆ ಅನುಭವಿಸಿ ನಿರಾಸೆ ಮೂಡಿಸಿದರು. ರಿಯಾನ್ ಪರಾಗ್ (37) ಕೂಡ ಮಿಂಚಿನ ಬ್ಯಾಟಿಂಗ್ ನಡೆಸಿದ್ದು ತಂಡದ ಸ್ಕೋರ್ ಹೆಚ್ಚಳಕ್ಕೆ ಕಾರಣವಾಯ್ತು.