image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೆಪೌಕ್ ಮೈದಾನದಲ್ಲಿ 7 ವರ್ಷಗಳ ಬಳಿಕ ಗೆದ್ದು ಬೀಗಿದ ಭಾರತ...

ಚೆಪೌಕ್ ಮೈದಾನದಲ್ಲಿ 7 ವರ್ಷಗಳ ಬಳಿಕ ಗೆದ್ದು ಬೀಗಿದ ಭಾರತ...

ಚೆನ್ನೈ : ಇಂಗ್ಲೆಂಡ್​ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯಲ್ಲಿ ಇಂಗ್ಲೆಂಡ್​ ನೀಡಿದ್ದ 166 ರನ್ ಗಳ ಗುರಿ ಬೆನ್ನತ್ತಿದ್ದ ಸೂರ್ಯ ಪಡೆ ತಿಲಕ್​ ವರ್ಮಾ ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ರೋಚಕ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದಿದ್ದ ಇಂಗ್ಲೆಂಡ್ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ತಂಡದ ಪರ ನಾಯಕ ಬಟ್ಲರ್​ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿ, 30 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ ಸಹಾಯದಿಂದ 45 ರನ್​ ಚಚ್ಚಿದರು. ಅರ್ಧಶತಕದ ಹೊಸ್ತಿಲಲ್ಲಿದ್ದ ಅವರಿಗೆ ಅಕ್ಷರ್​ ಪಟೇಲ್​ ಶಾಕ್​​ ನೀಡಿದರು. ಭರ್ಜರಿ ಬೌಲಿಂಗ್​ ಮೂಲಕ ವಿಕೆಟ್​ ಉರುಳಿಸಿದರು.

ಬಳಿಕ ಬಂದ ಬ್ಯಾಟರ್​​ಗಳು ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಬ್ರೈಡನ್​ ಕಾರ್ಸ್​ 31 ರನ್​ ಗಳಿಸಿದ್ದು ತಂಡದ ಸ್ಕೋರ್​ ಸುಧಾರಿಸಲು ಸಾಧ್ಯವಾಯ್ತು.

ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್​ ಮಾಡಿದ್ದ ಆಂಗ್ಲರು ಪವರ್​ ಪ್ಲೇನಲ್ಲಿ 50ಕ್ಕೂ ಅಧಿಕ ರನ್​ ಚಚ್ಚಿ ದೊಡ್ಡ ಸ್ಕೋರ್​ ಕಲೆ ಹಾಕುವ ಸೂಚನೆ ನೀಡಿದ್ದರು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಭಾರತೀಯ ಬೌಲರ್​​ಗಳು ಆಂಗ್ಲರ ಬ್ಯಾಟಿಂಗ್​ ವೇಗಕ್ಕೆ ತಡೆಯೊಡ್ಡಿದರು. ಇದರಿಂದಾಗಿ 165 ರನ್​ ಗಳಿಸಲಷ್ಟೇ ಇಂಗ್ಲೆಂಡ್​ ಶಕ್ತವಾಯ್ತು.

ಮತ್ತೊಂದೆಡೆ 166 ರನ್ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ತತ್ತರಿಸಿತು. 10 ಓವರ್ ಮುಕ್ತಾಯದ ವೇಳೆಗೆ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್​ ಸಂಜು ಸ್ಯಾಮ್ಸನ್ (5), ಅಭಿಷೇಕ್ ಶರ್ಮಾ (12), ಸೂರ್ಯ ಕುಮಾರ್ ಯಾದವ್ (12), ಧ್ರುವ್​ ಜುರೆಲ್ (4), ಹಾರ್ದಿಕ್​ ಪಾಂಡ್ಯ (7), ಅಕ್ಷರ್ ಪಟೇಲ್ (2) ಅಲ್ಪಮೊತ್ತಕ್ಕೆ ಪೆವಿಲಿಯನ್​ ಸೇರಿದ್ದರಿಂದ ತಂಡಕ್ಕೆ ಸೋಲಿನ ಭೀತಿ ಎದುರಾಗಿತ್ತು.

Category
ಕರಾವಳಿ ತರಂಗಿಣಿ